ಮದುವೆಯೆಂದರೆ ಸ್ವಾತಂತ್ರದ ಹರಣ
ನಮ್ಮತನವ ವಿಮರ್ಶೆಗೊಳಪಡಿಸಿ ತೋರುವ ಮರಣ
ತನ್ನ ಮನೆಯಲ್ಲೇ ಆಗುವನು ಪರಕೀಯ
ಸುಖ-ಸಂತೋಷದ ತೋರುವಿಕೆಯ ರಾಜಕೀಯ
ಮಾತಿಗೆ ಬೆಲೆಯಿಲ್ಲ ,ತನ್ನವರ ನಡುವೆಯೇ ಅಸ್ಪೃಶ್ಯ
ನೋಡುಗರಿಗೆ ಮನರಂಜನೆಯ ದೃಶ್ಯಕಾವ್ಯ
ಎಲ್ಲೇ ಹೋದರೂ, ತಡವಾಗಿ ಬಂದರೂ
ಮೈಮೇಲೆ ಬೀಳುವುದು ಪ್ರಶ್ನೆಗಳ ಬಾಣ
ಮನೆಯಲ್ಲಿ ತನ್ನ ಪಾಡಿಗೆ ತಾನು ಸುಮ್ಮನಿದ್ದರೂ
ಠೀಕೆ-ಟಿಪ್ಪಣಿ ಮೊನಚು ಮಾತಿನ ಭಾಷಣ
ಹೆಚ್ಚು ಮಾತನಾಡಿದರೂ ಕಷ್ಟ
ಮೌನಿಯಾದರಂತೂ ತೀರ ನಿಕೃಷ್ಟ
ಬೆಂಕಿಯಿಲ್ಲದೆ ಬೇಯುವುದೇ ಸಂಸಾರ
ಇದುವೇ ಸತ್ಯ ದರುಶನದ ಸಾಕ್ಷಾತ್ಕಾರ
Thursday, November 11, 2010
Subscribe to:
Post Comments (Atom)
ಅಜೇಯ
ಕಾಳ ರಾತ್ರಿಯ ಕತ್ತಲು ನನ್ನ ಆವರಿಸಿ ಕಾಡಿದೆ , ಕಪ್ಪು ಕತ್ತಲು ಅಡಿಯಿಂದ ಮುಡಿಯವರೆಗೂ ಕಟ್ಟಿಹಾಕಿ . ಎಲ್ಲಾ ದೇವರುಗಳಿಗೂ ನನ್ನ ಅನಂತಾನಂತ ಧನ್ಯವಾದಗ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment