ಕನ್ನಡಿಯ ಮುಂದೆ ನಿಂತು ನನ್ನನ್ನೇ ನೋಡಿಕೊಂಡೆ
‘ಮುಗ್ದ ಹುಡುಗ’ ಮನಸ್ಸು ಹೇಳಿತು
ಬುದ್ದಿ ನಗುತ್ತಿತ್ತು ‘ಮುಗ್ದ ಹುಡುಗ’
ಕಣ್ಣು ಮಿಟುಕಿಸಿದೆ ನನ್ನನ್ನೇ ನಾನು ಮರೆತು
ನಾನೊಬ್ಬ ದೊಡ್ಡ ಚಿತ್ರದ ಹೀರೋ ಎಂದು ನನಗೆ ನಾನೇ
ಭಾವಿಸಿಕೊಂಡೆ, ಕೈ ತಲೆಗೂದಲನ್ನು ತೀಡುತ್ತಿತ್ತು
ಮನಸ್ಸು ಹತ್ತು ವರ್ಷ ಮುಂದೆ ಹೋಗಿ ನಿಂತಿತ್ತು
ಚಿತ್ರ ಮಂದಿರದಲ್ಲಿ ನೂರು ದಿನ ಧಾಟಿ ಮುನ್ನುಗ್ಗುತ್ತಿದೆ
ನನ್ನ ನಾಯಕತ್ವದ ಚಿತ್ರ, ನಿರ್ಮಾಪಕರು ನನ್ನ ಮನೆಯ
ಮುಂದೆ ಸಾಲುಗಟ್ಟಿ ನಿಂತಿದ್ದಾರೆ ನನ್ನ ಕಾಲ್ ಶೀಟಿಗಾಗಿ
ಎಲ್ಲಿ ಹೋದರೂ ಹುಡುಗಿಯರ ಸಾಲು ಸಾಲು ನನ್ನ
ಹಸ್ತಾಕ್ಷರಕ್ಕಾಗಿ,ನನ್ನ ಚುಂಬಿಸಲು ಮುಗಿಬೀಳುತ್ತಿದ್ದಾರೆ
ಕೆಲವೇ ದಿನಗಳಲ್ಲಿ ಅಸಹ್ಯವಾಗತೊಡಗಿತು
ನನ್ನ ಸ್ವಾತಂತ್ರ ಹರಣವಾಗತೊಡಗಿತು
ಗೆಲುವಿನ ಗೀಳು ಅಂಟಿಕೊಂಡಿತು
ಸೋಲಿನ ರುಚಿಯೇ ಚಂದವೆನಿಸಿತು
ಅಜ್ನಾತವಾಸಕ್ಕೆ ಹೊರಡಬೇಕೆನಿಸಿತು
ಸಾಕು ಸಾಕೆನಿಸಿತು
ಮುಂದೆ ಬೇಡವೆನಿಸಿತು
ನಾನು ಏನಾಗಬೇಕಾಗಿತ್ತು?
ನಾನು ಏನಾದೆ?
ಉತ್ತರ ಸಿಗದ ಪ್ರಶ್ನೆಗಳು
ಸುಳಿಸುಳಿಯಾಗಿ ನನ್ನ ಬಳಸುತ್ತಿತ್ತು
ದಿಗಂತದ ಸೂರ್ಯ ಬರುವೆ ಎಂದು ತೆರಳುತ್ತಿದ್ದ
ಮನದಲ್ಲಿ ನೂರು ಪ್ರಶ್ನೆಗಳ ಹುಟ್ಟುಹಾಕಿ
ನಾಳೆ ಉತ್ತರ ಹೇಳು ಎಂದು ಹೋದ ಗುರುವಿನಂತೆ ಕಂಡ.
ಹಣೆಯ ಮೇಲಿ ನೂರು ಬೆವರಿನ ಹನಿಗಳು ಮೂಡಿತ್ತು
ವಾಸ್ತವಕ್ಕೆ ಇಳಿದ ಮೇಲೆ ಕಂಡ ಮನಸ್ಸಿನ ಕಣ್ಣೀರದು
ಭ್ರಮೆ-ವಾಸ್ತವ ಮನುಷ್ಯನನ್ನು ತಿಂದುಬಿಡುತ್ತೆ
ಭ್ರಮೆಯೇ ಬಧುಕು ಎಂದು ನಡೆಯುವವರೇ ಹೆಚ್ಚು
ವಾಸ್ತವವ ಅರಿತು ನಡೆಯುವವನೇ ನಿಜವಾದ ನಾಯಕ
ಕನ್ನಡಿಯು ನನ್ನ ಕಂಡು ನಗುತ್ತಿತ್ತು
ಮನದಲ್ಲಿ ಮೂಡಿದ ಚಿತ್ರ ಬದಲಾಗಿತ್ತು.
Thursday, November 4, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment