Saturday, November 27, 2010

||ಸಾಧನ ಭೈರವ||

ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ


ಸತ್ತಂತಿರುವ ಮನವ ಬಡಿದೆಚ್ಚರುಸು
ನಿದ್ದೆಯಿಂದ ಮೈಮರೆಯುವವರ ಭ್ರಾಂತಿಯ ಇಳಿಸು
ಮೈಗಳ್ಳರ ಸೊಗಲಾಡಿತನವನು ಸಂಹರಿಸು
ಕಷ್ಟದಿ ಸೆಣಸುವವರನು ಪ್ರೋತ್ಸಾಹಿಸು


ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ


ನೀ ನಡೆಯುವ ಸಾಧನೆಯ ಪಥದಲ್ಲಿ
ಜ್ಜಾನೋದಯವಾಗಲಿ ಮತಿಮತಿಯಲ್ಲಿ
ಸಾಧಕರ ವೇದಾಂತಿ ತಾರ್ಕಿಕರ ಆದರ್ಶದಲ್ಲಿ
ಜ್ಜಾನಜ್ಯೋತಿಯು ಬೆಳಗಲಿ ಭುವಿಯಲ್ಲಿ


ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ

ಒಂದೇ ಗುರಿ ಕೊನೆಯಲ್ಲ
ಮುಂದಿಹುದು ಭವಿಷ್ಯದ ಗುರಿಯಿಲ್ಲಿ
ಸಾಧನೆ ಎಂದೂ ನಿಂತನೀರಲ್ಲ
ಸಾಧಕನ ಚೈತನ್ಯದ ಕಲ್ಪವಲ್ಲಿ


ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...