ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ
ಸತ್ತಂತಿರುವ ಮನವ ಬಡಿದೆಚ್ಚರುಸು
ನಿದ್ದೆಯಿಂದ ಮೈಮರೆಯುವವರ ಭ್ರಾಂತಿಯ ಇಳಿಸು
ಮೈಗಳ್ಳರ ಸೊಗಲಾಡಿತನವನು ಸಂಹರಿಸು
ಕಷ್ಟದಿ ಸೆಣಸುವವರನು ಪ್ರೋತ್ಸಾಹಿಸು
ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ
ನೀ ನಡೆಯುವ ಸಾಧನೆಯ ಪಥದಲ್ಲಿ
ಜ್ಜಾನೋದಯವಾಗಲಿ ಮತಿಮತಿಯಲ್ಲಿ
ಸಾಧಕರ ವೇದಾಂತಿ ತಾರ್ಕಿಕರ ಆದರ್ಶದಲ್ಲಿ
ಜ್ಜಾನಜ್ಯೋತಿಯು ಬೆಳಗಲಿ ಭುವಿಯಲ್ಲಿ
ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ
ಒಂದೇ ಗುರಿ ಕೊನೆಯಲ್ಲ
ಮುಂದಿಹುದು ಭವಿಷ್ಯದ ಗುರಿಯಿಲ್ಲಿ
ಸಾಧನೆ ಎಂದೂ ನಿಂತನೀರಲ್ಲ
ಸಾಧಕನ ಚೈತನ್ಯದ ಕಲ್ಪವಲ್ಲಿ
ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ
Saturday, November 27, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment