Monday, November 22, 2010

ಸುನೀತ- ||ಅದ್ವೈತರು||

ಮೌನದಲ್ಲೂ ಬಗೆಗಳುಂಟು, ನಿನ್ನ ಮೌನಕ್ಕೆ ಕಾರಣವೇನು?
ಕೋಪದ ಮೌನವುಂಟು,ಕೋಪವನ್ನು ತಡೆಯುವಿಕೆಯೋ ಹೇಗೇ?
ಮನಸ್ಸಿನಲ್ಲಿ ನಡೆಯುವ ಕದನ, ಮುಖದಲ್ಲಿ ಅದರ ಪ್ರತಿಬಿಂಬ
ಕಂಗಳೇ ಹೇಳುತ್ತೆ ಮೌನವೇನೋ ನಿಜ, ಬಾಣಗಳಂತೆಸೆಯುವ ಕಿಡಿಗಳೇಕೆ?
ಸಂತಸದ ಮೌನವಂತೂ ಅಲ್ಲ, ಚಂದಿರನ ತಬ್ಬಿದ ಕಾರ್ಮೋಡವೇ!
ಮುಖದಲ್ಲೇನೋ ಹೊಳಹು ಇದೆ, ಬೆಳಕು ಮಾತ್ರ ಮಬ್ಬಾಗಿದೆ
ಕೋಪಕ್ಕೆ ಕಾರಣವಂತೂ ನಾನೇ ಏನೋ!? ವಿಷಯವೇನೂ ತಿಳಿದಿಲ್ಲ
ಬಟ್ಟೆ, ಹಣ,ಒಡವೆಯಂತೂ ಅಲ್ಲ, ಮಾತಿನ ವಿರಳವೇ? ಏಕಾಂತವೇ?
ಸಂಬಂಧಿಗಳ ಕಿರಿಕಿರಿಯಂತೂ ಇಲ್ಲ, ಇನ್ನೆಲ್ಲಿಯ ಜಗಳ ಕದನ!
ಬೆಳಗು ಕಳೆದು ಇರುಳು ಮುಸುಕುವ ಹಾಗೆ ನಿನ್ನ ಮೊಗದ ಸಿರಿಯೂ..
ಬೆಳಗಿನ ಸೂರ್ಯನೂ ನಾನೇ.. ಇರುಳಿನ ಚಂದ್ರನೂ ನಾನೇ.. ನೀನೇ ಭೂಮಿ
ಮೌನ ಇರುಳು ಕ್ಷಣಿಕವೇ ನಮಗೆ- ಅಮಾವಾಸ್ಯೆಯಂತೂ ದೂರದೂರ
ಸೂರ್ಯ ಚಂದ್ರರನ್ನು ಮುತ್ತಿಕ್ಕುವ ಕಾರ್ಮೋಡಗಳು ಸಹಜ ನಾನು ನೀನೂ ಸಹಜ
ಇಲ್ಲಿ ಭೂಮಿ ಯಾರೋ, ಸೂರ್ಯಚಂದ್ರರಾರೋ- ನಾವು ಸದಾ ಅದ್ವೈತರು.....

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...