ಮೌನದಲ್ಲೂ ಬಗೆಗಳುಂಟು, ನಿನ್ನ ಮೌನಕ್ಕೆ ಕಾರಣವೇನು?
ಕೋಪದ ಮೌನವುಂಟು,ಕೋಪವನ್ನು ತಡೆಯುವಿಕೆಯೋ ಹೇಗೇ?
ಮನಸ್ಸಿನಲ್ಲಿ ನಡೆಯುವ ಕದನ, ಮುಖದಲ್ಲಿ ಅದರ ಪ್ರತಿಬಿಂಬ
ಕಂಗಳೇ ಹೇಳುತ್ತೆ ಮೌನವೇನೋ ನಿಜ, ಬಾಣಗಳಂತೆಸೆಯುವ ಕಿಡಿಗಳೇಕೆ?
ಸಂತಸದ ಮೌನವಂತೂ ಅಲ್ಲ, ಚಂದಿರನ ತಬ್ಬಿದ ಕಾರ್ಮೋಡವೇ!
ಮುಖದಲ್ಲೇನೋ ಹೊಳಹು ಇದೆ, ಬೆಳಕು ಮಾತ್ರ ಮಬ್ಬಾಗಿದೆ
ಕೋಪಕ್ಕೆ ಕಾರಣವಂತೂ ನಾನೇ ಏನೋ!? ವಿಷಯವೇನೂ ತಿಳಿದಿಲ್ಲ
ಬಟ್ಟೆ, ಹಣ,ಒಡವೆಯಂತೂ ಅಲ್ಲ, ಮಾತಿನ ವಿರಳವೇ? ಏಕಾಂತವೇ?
ಸಂಬಂಧಿಗಳ ಕಿರಿಕಿರಿಯಂತೂ ಇಲ್ಲ, ಇನ್ನೆಲ್ಲಿಯ ಜಗಳ ಕದನ!
ಬೆಳಗು ಕಳೆದು ಇರುಳು ಮುಸುಕುವ ಹಾಗೆ ನಿನ್ನ ಮೊಗದ ಸಿರಿಯೂ..
ಬೆಳಗಿನ ಸೂರ್ಯನೂ ನಾನೇ.. ಇರುಳಿನ ಚಂದ್ರನೂ ನಾನೇ.. ನೀನೇ ಭೂಮಿ
ಮೌನ ಇರುಳು ಕ್ಷಣಿಕವೇ ನಮಗೆ- ಅಮಾವಾಸ್ಯೆಯಂತೂ ದೂರದೂರ
ಸೂರ್ಯ ಚಂದ್ರರನ್ನು ಮುತ್ತಿಕ್ಕುವ ಕಾರ್ಮೋಡಗಳು ಸಹಜ ನಾನು ನೀನೂ ಸಹಜ
ಇಲ್ಲಿ ಭೂಮಿ ಯಾರೋ, ಸೂರ್ಯಚಂದ್ರರಾರೋ- ನಾವು ಸದಾ ಅದ್ವೈತರು.....
Subscribe to:
Post Comments (Atom)
ಅಪರಿಚಿತ ಅತಿಥಿ
ಬಾ , ಓ ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।। ಚಳಿಗಾಳಿ ಹೆದರಿ ಓಡಿಹೋ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment