Thursday, November 11, 2010

-ಅತಂತ್ರ-

ಏನು ಕಾರಣವ ಹೇಳಲಿ?
ನಾಳೆ ನಾನು ಬರುವುದಿಲ್ಲವೆಂದು
ಏನು ಹೇಳಿದರೂ
ನೀನು ತಿಳಿಯುವೆ ನನ್ನಲಿ ಪ್ರೀತಿಯಿಲ್ಲವೆಂದು
ನೂರು ಮಾತು ಸಾಕಾಗೊಲ್ಲ
ನಿನ್ನ ಹೇಗೆ ತಣಿಸಲಿ?
ನಿನ್ನೆ ಬರುವೆನೆಂದು ಹೇಳಿ
ನಾಳೆ ಬಾರೆನೆಂದರೆ ಮಾತು ಸಾಯುವುದಿಲ್ಲವೇ?

ಸುಮ್ಮನೇ ಕುಳಿತು ಯೋಚಿಸುವ ಭಾವಶಿಲ್ಪ
ಮನದೊಳಗೆ ಕಾಣದ ಕಧನದ ಮೂರ್ತಶಿಲ್ಪ
ಮನವ ನೋಯಿಸಿ ಫಲವೇನು?
ಆರ್ತನಾದದಲಿ ಆಂತರ್ಯದ ಭಾವ ಪ್ರತಿಮೆ ತುಂಬಿಹುದೇ?

ಮನಸ್ಸಿನಾಳಕ್ಕೆ ಇಳಿದು ತಿಳಿಯಲಾರೆ
ಮಾತಿನಲಿ ಹೇಳಿದರೇ ಅರ್ಥವಾಗದ ಸ್ಥಿತಿ ನನ್ನದು
ಅರ್ಥಮಾಡಿಕೊಳ್ಳಬೇಕಿದೆ ನಿನಗಾಗಿಯೇ
ಕಾರಣವ ಬಿಟ್ಟೆ ನಿನಗಾಗಿಯೇ ಬರುವವನಿದ್ದೇನೆ

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...