ಆರ್ಯ-ಚಂದ್ರಮುಖಿ

ತಿಳಿನೀಲಿ ಆಕಾಶದಲ್ಲಿ
ಹಾಲು ಚೆಲ್ಲಿದ ಹೊಂಬೆಳಕಲ್ಲಿ
ತಾರೆಯರ ಒಡನಾಟದಲ್ಲಿ
ಚಂದ್ರಮುಖಿ ಪಯಣಿಸುತಿಹಳು

ಕರ್ತವ್ಯದ ಕರೆಗೆ ಓಗೊಟ್ಟು
ಸಪ್ತ ಹಯವೇರಿ
ಬಾನಿನಂಗಳಕ್ಕೆ ಲಗ್ಗೆ ಇಟ್ಟನು
ಆರ್ಯ ಕುಮಾರ

ವಜ್ರ ಕಿರೀಟಗಳಿಂದ ಭೂಷಿತನಾದ
ಆರ್ಯ ಕುಮಾರನ ಸೌಂದರ್ಯವ
ಕಂಡು ನಾಚಿ ನೀರಾದಳು ಚಂದ್ರಮುಖಿ

ಚಂದ್ರಮುಖಿಯಲಿ ಪೇಮಾಂಕುರಿಸೆ
ನಾಲಗೆಗೆ ಮಾತುಗಳು ಎಟುಕದೆ
ನಾಚಿಕೆಯಿಂದ ಕೆನ್ನೆ ಕೆಂಪೇರಿದವು

ತಿಳಿದಾ ಗಗನವು ತಾನೇ ಆರ್ಯ ಕುಮಾರನಿಗೆ
ಮನ ಸೋತಂತೆ ನಾಚಿ
ಬಾನೆಲ್ಲಾ ಕೆಂಪಾಗಿಸಿದನು

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...