-ಶಿಲ್ಪಿಯ ಶ್ರಮ-


ಒಮ್ಮೆ ದೇವಾಯಲಕ್ಕೆ ಹೊರಟೆ
ಮನದಲ್ಲಿ ಅನೇಕ ಭಾವತೆಗಳಿಗೆ ಜಾಗಮಾಡಿಕೊಡುತ್ತಾ
ಈ ಮನದಲ್ಲಿ ಯೋಚಿಸುವುದಕ್ಕೆ ಶಕ್ತಿಕೊಟ್ಟವರಾರು?
ಈ ಭೂಮಿಗೆ ಬೆಳಕ ಚೆಲ್ಲುವರಾರು?
ಹೀಗೆ ಉತ್ತರ ಸಿಗದ ನೂರು ಪ್ರಶ್ನೆಗಳು ಮನದಲ್ಲಿ ಕಾದಟಕ್ಕಿಳಿಯಿತು
ಮನಸ್ಸಿನ ನೀರವತೆಯ ನಾಶಮಾಡಿ

ಗುಡಿಯ ಗೋಪುರ ದೂರಕ್ಕೆ ಕಾಣುವುದು
ಅದ್ಬುತ-ಕಲಾಚದುರನ ಕೈಚಳಕಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ
ಗುಡಿಯ ಘಂಟೆಯ ಶಬ್ದ ಕಿವಿಗೆ ಇಂಪಾಗಿ ಕೇಳಿಸುತಿತ್ತು
ಬೆಳಗಿನ ಸುಪ್ರಭಾತ ಮನದಲ್ಲಿ ಚೈತನ್ಯ ತುಂಬುತಿತ್ತು
ಮನದಲ್ಲಿ"ಕೃಷ್ಣಾ,ಕೃಷ್ಣಾ" ಜಪ ದೇಹದ
ಮೂಲೆಮೂಲೆಯಲ್ಲಿ ಮಾರ್ಧವಿಸುತಿತ್ತು

ದೇವನೊಬ್ಬ ನಾಮಹಲವು
ಹಲವು ಭಾಷೆ,ಧರ್ಮ,ತೋರುವ ಭಕ್ತಿ ಒಂದೇ
ಎಲ್ಲರೂ ಒಂದೇ,ಕಿತ್ತಾಟ ಹಲವು
ಎಲ್ಲರೂ ಮನುಷ್ಯರೇ,ಯೋಚನೆ ಮಾತ್ರ ಹಲವು
ಮೇಲು-ಕೀಳು,ಭೇದ-ಭಾವ ಕೀಳದೇ ಬೆಳೆದಿದೆ

ದೇವರ ಶಿಲೆ ಅತ್ಯದ್ಭುತ
ನೂರು ನಮನ ನಿನಗೆ ದೇವರೆಂದು
"ಮೂರ್ತಿ ಪೂಜೆ ಸಲ್ಲದು"
ಬುದ್ದಿಜೀವಿಗಳ ವ್ಯರ್ಥ ಆಲಾಪನೆ
ಬುದ್ದಿಯಿಲ್ಲದ?ಪ್ರಲಾಪನೆ
ನಾವು ನಮಿಸುವುದು ಆ ಕಲ್ಲು ದೇವರಿಗೇ ನಿಜ
ನಾವು ನಮಿಸುವುದು ಆ ಶಿಲೆಯ ಕೆತ್ತಿದ ಶಿಲ್ಪಿಯ ಕಲಾತ್ಮಕತೆಗೆ
ನಾವು ನಮಿಸುವುದು ಆ ಶಿಲ್ಪಿಯ ಭಾವನೆಗಳ ಎರಕಹೊಯ್ಯುವಿಕೆಗೆ
ನಾವು ನಮಿಸುವುದು ಆ ಶಿಲ್ಪಿಯ

ದೇವರನ್ನು ಧರೆಗೆ ಕರೆತರುವ ಅವನ ಭಗೀರಥ ಯತ್ನಕ್ಕೆ
ಅವನ ಅಸಾಧಾರಣ ತ್ಯಾಗಕ್ಕೆ
ಅವನ ಅಸಾಮಾನ್ಯ ಶ್ರಮಕ್ಕೆ
ಆ ಮೂರ್ತಿಗೆ ನಮಿಸುವುದು ತಪ್ಪಲ್ಲವಲ್ಲ,ತಪ್ಪಲ್ಲವಲ್ಲ

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...