ಮೋಡ ಕವಿಯುತ್ತಿದೆ ನಾಳೆ ಬರುವೆಯೆಂದು
ಮನಸು ಹಾರುತ್ತಿದೆ ಸುಖದ ಶಿಖರವ ಏರಲೆಂದು
ಮಂಧಬೆಳಕು ನೂರು ಜನರು ಅಲ್ಲಿ
ಕಾಯುತ್ತಾ ಕುಳಿತಿದೆ ಗ್ರಾಹಕರು ಬರುವರೆಂದು
ಖಾಲಿ ಬಾಟಲು, ಖಾಲಿ ಕುರ್ಚಿ ಅಲ್ಲಿ
ಕತ್ತಲೊಳಗೆ ಸುಖವೂ ಹೂತಿರುವುದೆಂದು
ದ್ರಾಕ್ಷಾರಸ ಗಂಟಲೊಳಗಿಳಿದರೆ ಸ್ವರ್ಗ ಆರೋಹಣ
ಕತ್ತಲೊಳಗೆ ಮೈಮರೆಯುತ್ತಾ ನಾಳೆ ಬರುವುದೆಂದು
ದೇಹದ ಆಯಸ್ಸು ಇಳೆಯ ಕಡೆಗೆ ಅವರೋಹಣ
ಬೆಳಗು ಕಾಣದೆ ಹೃದಯವನ್ನೇ ಇರಿಯುವುದೆಂತು
ಕತ್ತಲೊಳಗೆ ಬೆಳಕು ಹುಡುಕುವ ಪಯಣಿಗ
ಹೃದಯದೊಳಗೆ ಪ್ರೀತಿಯ ವಿಷವ ಅರೆಯುವವ
ಬೆಳಗಿನೊಳಗೆ ಕತ್ತಲೆ ಮಾರುವ ವ್ಯಾಪಾರಿ
ಸಾವಿಗಾಗಿ ಕಾಯುವ ಪ್ರೀತಿಗಾಗಿ ಸೆಣಸುವ ಸೈನಿಕ
ರಾತ್ರಿಯಿಡೀ ನಿದ್ದೆಕೆಟ್ಟು ಪ್ರೀತಿಯ ಕೋಟೆ ಕಾಯುವೆ
ದೇಹದಲ್ಲಿ ಶಕ್ತಿ ಕುಂದದೇಯಿರಲೆಂದೇ ಈ ಮಧು
ಹೃದಯ ಛಿದ್ರ ಛಿದ್ರವಾಗಿದೆ ಅವಳು ಬಿಟ್ಟ ಬಾಣದಿಂದ
ಹೆಜ್ಜೆ ಮುಂದೆಹಾಕದಂತೆ ಕಟ್ಟಿಹಾಕಿದೆ ಅವಳ ಪ್ರೀತಿಯ ಬಲೆ
ಬಲೆಯೊಳಗೆ ಸಿಕ್ಕ ಮೀನಿನಂತೆ ನಾನಾಗಿಹೆ
ಮಧುವಿನ ಹನಿಹನಿಯಲ್ಲೂ ಅವಳ ಕಹಿನೆನೆಪು
ಭಾಳಿನ ಪುಟಪುಟದಲ್ಲೂ ಅವಳ ಅಪೂರ್ಣ ಸಹಿ
ಅವಳ ನೆನೆಪೇ ಹೆಚ್ಚಾಗಿ ಆಗಿಹೆ ಮಧುಮೋಹಿ
ಸಾವಿನ ಒಂದೋಂದು ಮೆಟ್ಟುಲೇರುತ್ತಿದ್ದರೆ ಏನೋ ಹರ್ಷ
ಬದುಕಿ ಸಾಧಿಸಿದ್ದಾದರೂ ಏನು? ಪ್ರಶ್ನೆ ಮುಂದಿದೆ
ಕೇಕೆ ನಗುವ ಹಾಕಿ ಅವಳ ನಗುವನೇ ತಂದಿದೆ
ಸಮಯವನೇ ಕೊಂದೆ, ನನಗೆ ನಾನೇ ಸಮಾಧಿ ಕಟ್ಟಿದೆ
ಮೋಡ ಕವಿದಿದೆ ಹೃದಯ ಭಾರವಾಗಿದೆ
ಭೂಮಿಗೆ ಭಾರವಾಗಿ ಕಾಯುತಿಹೆನು ಇಳೆ
Thursday, November 11, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment