Thursday, November 11, 2010
||ಯುಗಾದಿ||
ಜನಮನದಲೀ ಯುಗಾದಿ
ಯುಗಾದಿ ಆದಿಯಾದರೂ ಅಂತ್ಯದ ಸುಳಿವಿಲ್ಲ
ಅಂತ್ಯವಿಲ್ಲದಾತನ ಅನಂತ ಕ್ರೀಡೆಯ ನೋಡೋ ಮನುಜ
ಜಗದೊಡೆಯನ ಚದುರಂಗದಾಟದ ಬೊಂಬೆಗಳು ನಾವು
ಗೆಲ್ಲುವವರು ಯಾರೋ?
ಸೋಲುವವರು ಯಾರೋ?
ಸೋಲರಿಯದವನ ಕೈಚಳಕವನು ಬಲ್ಲವನು ನಾನಲ್ಲ!
ಸೋಲೋ.......?
ಗೆಲುವೋ.....?
ಅನುಭವಿಸುವವನು ನಾನೇ.......
ಹೋಳೀ ಹಬ್ಬದ ಓಕುಳಿಯ ಚೆಲ್ಲಿದಂತೆ
ಗಿಡ ಮರಗಳಲಿ ಬಣ್ಣವನ್ನೇ ಚೆಲ್ಲಿದನು.
ಬಿಸಿಲ ದಗೆಯಲೀ ಆದಿ!
ಯಾವ ಯುಗವೋ ಏನೋ?
ಅರಿವೆಂಬ ಅರಿವೆ ಇಲ್ಲದವನು ನಾನು
ಅರಿತವನು ನೀನು
ತಿಳಿಯ ಹೇಳೋ ಅರಿತಜ್ಜ.......
ಧಗೆಯಲ್ಲಿ ಯುಗದ ಆದಿ!
ಎಷ್ಟು ಸಮಂಜಸವೋ ಏನೋ?
ಅರಿತಜ್ಜನ ಕಾರ್ಯವೈಖರಿಯ ಬಲ್ಲವನು ನಾನಲ್ಲ
ಹೀಗೆಳೆಯುವ ಮನಸ್ಸಿನವನು ಅಲ್ಲ
ಆಗಿ ಹೋಗುದುದಕ್ಕೆ ಚಿಂತಿಸಿ ಫಲವೇನು?
ಸೃಷ್ಟಿಯ ಸಮಷ್ಟಿಯ ವೈಚಿತ್ರ್ಯವೀ ಯುಗಾದಿ......
Subscribe to:
Post Comments (Atom)
ಈ ಸಮಯ
ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ . ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ . ಹಣ ಮತ್ತೆ ಸಂಪಾದಿಸಬಹುದು , ಸಮ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
ಕವನ ಸುಂದರವಾಗಿದೆ. ಧನ್ಯವಾದಗಳು
ReplyDeleteಮಹೇಶ ಭಟ್ಟ ರವರೇ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ReplyDelete