ಜನಸಾಗರ ಹರಿದುಬರುತ್ತಿದೆ
ಅದು ಜಾತ್ರೆಯೋ?
ಜನರ ಯಾತ್ರೆಯೋ?
ತಿಳಿಯದಾಗಿದೆ ಏಕೆ ಹೀಗೆ ಹರಿದುಬರುತ್ತಿದ್ಡಾರೆಹೌದು ಇಲ್ಲಿ ಎಲ್ಲಕ್ಕೂ ಜಾತ್ರೆಯೇ
ತಿನ್ನುವುದಕ್ಕೆ
ಕೊಳ್ಳುವುದಕ್ಕೆ
ಬಸ್ಸಿಗೆ ಹತ್ತುವುದಕ್ಕೆ
ಮಾಯೆಯೋ ತಿಳಿಯದಾಗಿದೆ ಹೀಗೇಕೆ?
ಸುದ್ದಿ ತಿಳಿಯುತ್ತಿದ್ದಂತೆ
ಬೀದಿಗಿಳಿಯುತ್ತಾರೆ
ತವಕವೋ?
ಆಶಾವಾದವೋ?
ಅವಕಾಶಾವಾದವೋ?
ತಿಳಿಯದಾಗಿದೆ ಜನರಲ್ಲಿ ಹರಿವ ಚಿಂತನೆ?
ಸಿಕ್ಕಿದ್ದನ್ನು ಬಾಚುತ್ತಾರೆ
ಕೈಗೆ ಸಿಕ್ಕಿದ್ದನ್ನು ಬಿಸುಟುತ್ತಾರೆ
ಬಾಯಿಬಾಯಿ ಬಡಿದುಕೊಳ್ಳುತ್ತಾರೆ
ಮೊಸಳೆ ಕಣ್ಣೀರು ಸುರಿಸುತ್ತಾರೆ
ತಿಳಿಯದಾಗಿದೆ ಮುಖವಾಡವಾವುದೆಂದು?
ಎಲ್ಲರೂ ಮಹಾನ್ ನಟರೇ
ಮುಖದಲ್ಲಿ ಮಂದಹಾಸ
ಮನಸ್ಸಿನಲ್ಲಿ ನಡೆದಿದೆ ಖೂಳದಾಟ
ಹೊಟ್ಟೆ ಹೊರೆಯುವುದಕ್ಕೆ ನಡೆದಿದೆ ಕಾದಾಟ
ತಿಳಿಯದಾಗಿದೆ ಯಾವ ಮಾಯೆ ಆವರಿಸಿದೆಯೆಂದು?
ನಾನು ನಾನೇ
ನನ್ನದೇ ಹೆಚ್ಚು
ಅಹಂನ ಹುಚ್ಚು
ಬೃಹದಾಕಾರವಾಗಿ ಆವರಿಸಿದೆ ಬೆಂಕಿಯ ಕಿಚ್ಚು
ಕಣ್ಣು ಕುರುಡಾಗಿದೆ, ಬುದ್ದಿ ಮಂದವಾಗಿದೆ ಏನೂ ಮಾಡಲಾಗದೆ
Thursday, November 4, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment