ಮಾಧವ ಮುರಳೀಲೋಲ ಎಲ್ಲಿರುವೆಯೋ?
ನೀನು ಹೇಗಿರುವೆಯೋ?
ತಿಳಿಯುವ ತವಕವು ಮನದಲ್ಲಿ ಮೂಡಿದೆ ಇಂದು
ರಾಧಾಮಾಧವ ಎಲ್ಲಿ ಹುಡುಕಲಿ ನಿನ್ನ
ಎಲ್ಲಿ ಹುದುಗಿರುವೆ?
ನೀನಿಲ್ಲದೆ ಬದುಕಿರಲಾರೆನು ಎಂದೆಂದೂ
ಸುತ್ತ ತಿರುಗುವ ಉದ್ಬುದ್ದ ತಿರುಗುವ
ಗಾಳಿಯ ನಿಲ್ಲಿಸಿ ಕೇಳಿದೆ " ಕೃಷ್ಣನೆಲ್ಲಿ? ಕೃಷ್ಣನೆಲ್ಲಿ?" ಎಂದು
ತಂಗಾಳಿಯ ಬೀಸಿ ತಣಿಸಿ ಕಾಣದೆ ಮರೆಯಾಯಿತು
ಉಧ್ಯಾನವನದಲ್ಲಿ ಆಗ ತಾನೆ ಕಣ್ಣುಬಿಡುತ್ತಿರುವ
ಸುಮವನ್ನು ಕೇಳಿದೆ" ಕೃಷ್ಣನೆಲ್ಲಿ? ನೀ ಕಂಡೆಯಾ?" ಎಂದು
ನಗುಮೊಗದಿ ಅರಳಿ ಪರಿಮಳವ ಪಸರಿಸಿತು
ಮಾಮರದಲ್ಲಿ ಕುಳಿತ ಕೋಗಿಲೆಯನ್ನು ಕೇಳಿದೆ
" ಕೃಷ್ಣನೆಲ್ಲಿಹನು? ನೀ ಕಂಡೆಯಾ?" ಎಂದು
ಮಧುರ ಕಂಠದಿ ಸುಸ್ವರ ಗಾಯನ ಮಾಡಿತು
ಆಗಸದಲ್ಲಿ ಪಯಣಿಸುವ ಕರಿ-ಬಿಳಿ ಮೋಡಗಳ ಕೇಳಿದೆ
" ಹೇಳಿರಿ ಗೆಳೆಯರೇ ಮಾಧವನೆಲ್ಲಿಹನೆಂದು?"
ಆಗಸದಲ್ಲಿ ಕುಣಿಯುತ್ತಾ ತಂಪದ ಮಳೆಗೈದವು
ಕಾನನದಿ ತಿರುಗುವ ನವಿಲನ್ನು ಕೇಳಿದೆ
" ಗೆಳೆಯಾ ನೀನಾದರೂ ಹೇಳು ಮಾಧವನೆಲ್ಲಿಹನೆಂದು?"
ನೂರು ಕಣ್ಣುಗಳ ತೆರೆದು ತಕಥೈ ತಕಥೈ ನರ್ತನ ಮಾಡಿತು
ನೂರು ಹಾದಿಯ ಸವೆಸುತಾ ಸಾಗುವ ನದಿಯನ್ನು ಕೇಳಿದೆ
" ಹೇಳೇ ನೀರೇ ಮಾಧವನೆಲ್ಲಿಹನೆಂದು?"
ಮಧುರದಿ ತಂಪನ್ನೆರೆಯುತಾ ಸಾಗರದ ಕಡೆ ಓಡಿತು
ಅಂಡಲೆದು ಸುಸ್ತಾಗಿ ನನ್ನ ಮನವನೇ ಕೇಳಿದೆ
" ಎಲ್ಲಿಹನು ಆ ಮಾಧವನು?"
ನಿನ್ನೊಳಗೇ ಇಹನು ಅಂತರಂಗದ ಕಣ್ಣು ತೆರೆದು
ನೋಡೆಂದಿತು ಹೃದಯವು
Thursday, November 4, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment