-ಹೃದಯ ಮಾಧವ-

ಮಾಧವ ಮುರಳೀಲೋಲ ಎಲ್ಲಿರುವೆಯೋ?
ನೀನು ಹೇಗಿರುವೆಯೋ?
ತಿಳಿಯುವ ತವಕವು ಮನದಲ್ಲಿ ಮೂಡಿದೆ ಇಂದು
ರಾಧಾಮಾಧವ ಎಲ್ಲಿ ಹುಡುಕಲಿ ನಿನ್ನ
ಎಲ್ಲಿ ಹುದುಗಿರುವೆ?
ನೀನಿಲ್ಲದೆ ಬದುಕಿರಲಾರೆನು ಎಂದೆಂದೂ

ಸುತ್ತ ತಿರುಗುವ ಉದ್ಬುದ್ದ ತಿರುಗುವ
ಗಾಳಿಯ ನಿಲ್ಲಿಸಿ ಕೇಳಿದೆ " ಕೃಷ್ಣನೆಲ್ಲಿ? ಕೃಷ್ಣನೆಲ್ಲಿ?" ಎಂದು
ತಂಗಾಳಿಯ ಬೀಸಿ ತಣಿಸಿ ಕಾಣದೆ ಮರೆಯಾಯಿತು

ಉಧ್ಯಾನವನದಲ್ಲಿ ಆಗ ತಾನೆ ಕಣ್ಣುಬಿಡುತ್ತಿರುವ
ಸುಮವನ್ನು ಕೇಳಿದೆ" ಕೃಷ್ಣನೆಲ್ಲಿ? ನೀ ಕಂಡೆಯಾ?" ಎಂದು
ನಗುಮೊಗದಿ ಅರಳಿ ಪರಿಮಳವ ಪಸರಿಸಿತು

ಮಾಮರದಲ್ಲಿ ಕುಳಿತ ಕೋಗಿಲೆಯನ್ನು ಕೇಳಿದೆ
" ಕೃಷ್ಣನೆಲ್ಲಿಹನು? ನೀ ಕಂಡೆಯಾ?" ಎಂದು
ಮಧುರ ಕಂಠದಿ ಸುಸ್ವರ ಗಾಯನ ಮಾಡಿತು

ಆಗಸದಲ್ಲಿ ಪಯಣಿಸುವ ಕರಿ-ಬಿಳಿ ಮೋಡಗಳ ಕೇಳಿದೆ
" ಹೇಳಿರಿ ಗೆಳೆಯರೇ ಮಾಧವನೆಲ್ಲಿಹನೆಂದು?"
ಆಗಸದಲ್ಲಿ ಕುಣಿಯುತ್ತಾ ತಂಪದ ಮಳೆಗೈದವು

ಕಾನನದಿ ತಿರುಗುವ ನವಿಲನ್ನು ಕೇಳಿದೆ
" ಗೆಳೆಯಾ ನೀನಾದರೂ ಹೇಳು ಮಾಧವನೆಲ್ಲಿಹನೆಂದು?"
ನೂರು ಕಣ್ಣುಗಳ ತೆರೆದು ತಕಥೈ ತಕಥೈ ನರ್ತನ ಮಾಡಿತು

ನೂರು ಹಾದಿಯ ಸವೆಸುತಾ ಸಾಗುವ ನದಿಯನ್ನು ಕೇಳಿದೆ
" ಹೇಳೇ ನೀರೇ ಮಾಧವನೆಲ್ಲಿಹನೆಂದು?"
ಮಧುರದಿ ತಂಪನ್ನೆರೆಯುತಾ ಸಾಗರದ ಕಡೆ ಓಡಿತು

ಅಂಡಲೆದು ಸುಸ್ತಾಗಿ ನನ್ನ ಮನವನೇ ಕೇಳಿದೆ
" ಎಲ್ಲಿಹನು ಆ ಮಾಧವನು?"
ನಿನ್ನೊಳಗೇ ಇಹನು ಅಂತರಂಗದ ಕಣ್ಣು ತೆರೆದು
ನೋಡೆಂದಿತು ಹೃದಯವು

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...