Thursday, November 4, 2010

-ಕನಸು-


ನಾನೊಂದು ಕನಸ ಕಂಡೆ
ಮನಸೇ ಅದನು ಹೇಗೆ ಹೇಳಲಿ?

ನಾಡಿನ ನದಿಗಳೆಲ್ಲಾ ತುಂಬಿ ಹರಿಯುವುದ ಕಂಡೆ
ಗೋವುಗಳೆಲ್ಲಾ ಕರೆಯದೇ ಹಾಲು ಕೊಡುವುದ ಕಂಡೆ
ಚಾರಿತ್ರ್ಯದ ಹೊಳೆ ಹರಿದು ದ್ವೇಷದ ಅವನತಿಯ ಕಂಡೆ
ವ್ಯಕ್ತಿಯ ಅಹಂ ತಾನೇ ತಾನಾಗಿ ಸುಡುವುದ ಕಂಡೆ

ಪರನಾರೀ ಸಹೋದರರ ಕಂಡೆ
ಕಾಮ ಸಂಕಟಪಡುತ್ತಾ ನರಳುವುದ ಕಂಡೆ
ದ್ವೇಷ ಮತ್ಸರ ಮೋಹಗಳೆಲ್ಲಾ ಧೂಳಿಪಟವಾಗುವುದ ಕಂಡೆ
ನೋವು ತಾನೇ ಮಸಣದ ಹಾದಿ ಹಿಡಿಯುವುದ ಕಂಡೆ

ಜಾತಿ-ಮತ ಭೇದಗಳೆಲ್ಲಾ ಉಸಿರುಗಟ್ಟಿ ಸಾಯುವುದ ಕಂಡೆ
ಧರ್ಮಗಳೆಲ್ಲಾ ಮೂಲೆಗುಂಪಾಗುವುದ ಕಂಡೆ
ಗುಡಿ-ಮಸೀದಿ ಚರ್ಚುಗಳೆಲ್ಲಾ ಧರೆಗುರುಳುವುದ ಕಂಡೆ
ಮೃಗೀಯ ಮಖವಾಡ ಕಳಚಿ ಮಾನವೀಯತೆಯು
ಅನಾವರಣಗೊಳ್ಳುವುದ ಕಂಡೆ

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...