Thursday, November 4, 2010

-ಅರಿವಿನ ಹಣತೆ-

ಹಣತೆಯೊಂದು ಬೆಳಕ ಚೆಲ್ಲಿ
ಎಷ್ಟು ಕತ್ತಲ ನುಂಗುವುದೋ?
ಅದರ ಪರಿಧಿಯ ನಾ ಬಲ್ಲೆ
ಬೆಳಕ ಕಾಣದೆ ಎಷ್ಟು ಜೀವಗಳು ನರಳುತಿಹುದೋ?
ಮನದ ಪರಿಧಿಯ ನೀನೊಬ್ಬನೇ ಬಲ್ಲೆ
ರವಿಯ ಕಣ್ಣು ಭೂಮಿಯ ಕಡೆಗೆ
ಜೀವ ಕೋಟಿಗದುವೆ ಕಾರಣ ಏಳಿಗೆಗೆ
ಹೂವು ಹೊರಳುವುವು ಸೂರ್ಯನ ಕಡೆಗೆ
ನಮ್ಮ ಯೋಚನೆ ಬರಿಯ ಹೊಟ್ಟೆಯ ಬಗೆಗೆ
ಮನದ ದೀಪ ಹಚ್ಚಲೊಲ್ಲರು
ಬದುಕಿನ ಭೇಗುದಿಗೆ ನರಳುತಿಹರು
ಕೋಟಿಗೊಬ್ಬನೇ ಸಂಭವಿಸುವನು
ಜನರ ಮನದಲಿ ಅರಿವಿನ ಹಣತೆಯ ಹಚ್ಚುವನು
ಎಷ್ಟು ಯುಗಗಳು ಕಾಯಬೇಕೋ?
ಎಷ್ಟು ಜೀವಗಳು ನರಕಯಾತನೆ ಅನುಭವಿಸಬೇಕೋ?
ಮನದ ಅಂತಃಚಕ್ಷುವ ಎಚ್ಚರಗೊಳಿಸದ ಬೆಳಕು
ನೂರು ಇದ್ದರೇನು? ಇಲ್ಲದಿದ್ದರೇನು?

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...