ಎಲ್ಲಿ ಹೋದಿರಿ ಕಾರಣಗಳೇ
ಮನದ ನೆಮ್ಮದಿಯ ಹೊತ್ತು ಎತ್ತ ಹೋದಿರಿ?
ಗಹಗಹಿಸಿ ನಗುವ ನಗುವು ಮಾತ್ರ ಕೇಳಿಸುತ್ತಿದೆ
ಮನವು ದಿಕ್ಕುಗೆಟ್ಟು ಓಡುವಂತೆ ಮಾಡಿದೆ
ಕಾಣದ ಕಾರಣಗಳೇ
ಮನದ ತಿಳಿಯ ಕದಡಿದಿರೇಕೆ?
ಅತ್ತ ಹೇಳಲಾಗದೆ
ಇತ್ತ ಸುಮ್ಮನಿರಲಾಗದೆ ಮನಸು-ಬುದ್ಧಿ ಕದನಕ್ಕಿಳಿದಿದೆ
ಅದು ಸರಿ, ಇದು ತಪ್ಪು
ವಾದ-ವಿವಾದಗಳ ಸುಳಿಯಲ್ಲಿ
ಅದು ಸತ್ಯ, ಇದು ಮಿಥ್ಯ
ತರ್ಕ-ವಿತರ್ಕಗಳ ಬಾಣಲೆಯಲ್ಲಿ
ಬಿದ್ದು ಹೊರಳಾಡುವುದು
ನೋವಿನಲಿ ಬೇಯುವುದು
ಕಾಣದ ಗುರಿಯತ್ತ ಹೊರಳುವುದು
ಕಾರಣಗಳು ಗರಿಗೆದರಿ ನಲಿಯುವುದು
ಪೂರ್ವಾಗ್ರಹದ ಕಪ್ಪು ಮೋಡ ಆವರಿಸಿದೆ
ಬುದ್ಧಿಗೆ ಮಂಕು ಕವಿದಿದೆ ಬೆಳಕು ಕಾಣದೆ
ನಾನು ಹೇಳುವುದೇ ಸತ್ಯ ಬೇರೆಯವರದೆಲ್ಲಾ ಮಿಥ್ಯ
ಕಾಣದ ಪರದೆಯೊಂದು ಪರಿಧಿಯ ದಾಟದಿರಲೆಂದು ಕಟ್ಟಿಹಾಕಿದೆ
Thursday, November 11, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment