Thursday, November 4, 2010

-ಮನದ ಚಿಂತೆ-


ನೀನಿಲ್ಲದ ನಾನು ಹೇಗಿರಲಿ ಕೃಷ್ಣಾ
ನೀನಿಲ್ಲದ ಬಾಳು ಬಾಳೇ ಕೃಷ್ಣಾ

ಈ ಜೀವ ಕೊಟ್ಟವ ನೀನು
ಈ ಮನದ ಚೈತನ್ಯ ನೀನು
ನಿನ್ನ ಕಾಣದ ಈ ಮನ
ನಿನ್ನ ನೋಡದ ಈ ಕಣ್ಣು ಏತಕ್ಕೆ ಕೃಷ್ಣಾ

ಇಂದು ಕಾಣುವೆ ನಿನ್ನನ್ನೆಂದು
ಕನವರಿಸಿ ಕಾತರಿಸಿ ಕಾಯುತಿಹೆ
ಮನಸಿಗೆ ಕನಸಿಗೆ ದಿನಕ್ಕೊಂದು
ನೆಪವ ಹೇಳಿ ಸಾಕುಸಾಕಾಗಿ ನಿದ್ದೆಗೆಟ್ಟಿಹೆ

ವರುಷ ವರುಷಗಳು ಉರುಳಿಹೋಗಿದೆ
ತುಂಬಿ ತುಳುಕುವ ನದಿ ನಿನ್ನ ಹುಡುಕಿ ಎತ್ತಲೋ ಹರಿದಿದೆ
ಗಿರಿ,ತರುಲತೆ,ಗಿಡಮರಗಳೆಲ್ಲಾ ಬೆತ್ತಲಾಗಿವೆ
ನಿನ್ನ ಕಾಣದೆ ಏನು ಮಾಡಲಾಗದೆ ಚಿಂತೆಗೆ ಬಿದ್ದಿದೆ

No comments:

Post a Comment

ಅವಳೇ ಶಕ್ತಿ, ಅವಳೇ ಪ್ರಪಂಚ

 ಧೈರ್ಯದ ನಡೆ,  ಪ್ರಶಾಂತ ಧ್ವನಿ. ಕನಸೇ ಕಂಗಳು, ಅಭಯವೇ ರಕ್ಷಣೆ. ಬಿರುಗಾಳಿಯೂ ಅವಳೇ, ಬೆಂಕಿಯ ಕೆನ್ನಾಲಿಗೆಯೂ ಅವಳೇ. ಶಾಂತ ಸಮುದ್ರವೂ ಅವಳೇ, ಕರುಣೆಯ ಕಡಲೂ ಅವಳೇ. ನಮ್ಮ...