ನೀವೇ ಸ್ಪೂರ್ತಿ ಈ ಕವಿತೆಗೆ
ನೀವೇ ಸ್ಪೂರ್ತಿ ಈ ಬಾಳಿಗೆ
ನಿಮ್ಮ ಮನದ ಛಲ
ನಮ್ಮ ಬಾಳಿಗದುವೆ ಬಲ
ನಿಮ್ಮ ಜೀವನದ ಕಷ್ಟ
ಅಂದುಕೊಂಡೆವು ನಿಮಗಾಯಿತು ನಷ್ಟ
ನೀವು ಮುನ್ನಡೆದಿರಿ ಯಾವುದನ್ನೂ ಲೆಕ್ಕಿಸದೆ
ನೋಡು ನೋಡುತ್ತಿದ್ದಂತೆ ಸಾಧನೆಯ ತುತ್ತತುದಿಯ
ಗೆಲುವಿನ ಉತ್ಸಾಹದಿ
ಜೀವನದ ಏಳನೇ ವಯಸ್ಸಿನಲ್ಲಿ
ಯಾವುದೋ ವ್ಯಾಧಿಗೆ ಕಳೆದುಕೊಂಡಿರಿ ಕಣ್ಣುಗಳ ಬೆಳಕು
ಎಲ್ಲರಿಂದಲೂ ಕೇಳಿಸಿಕೊಂಡಿರಿ ಅನುಕಂಪದ ಅಲೆ
ನಿಮ್ಮ ದಾರಿ ನೀವೇ ಕಂಡುಕೊಂಡಿರೆ ಭಲೇ ಅಬಲೆ
ಸಾಧನೆಯಿರುವುದು ಸಾಧಕನಿಗಲ್ಲದೆ ಸೋಮಾರಿಗಲ್ಲ
ಈ ಮಾತು ನಿಜವಾಗಿಸಿದಿರಿ ನಡೆದು ಸಾಧನೆಯ ದಾರಿಯಲ್ಲಿ
ಸಾಮಾನ್ಯರೂ ಸಾಧಿಸದ ಸಾಧನೆ ನಿಮ್ಮದೆಂದು ಹೆಮ್ಮೆ ನಮಗೆ
ಪ್ರತಿದಿನವೂ,ಪ್ರತಿಹೆಜ್ಜೆಯಲ್ಲೂ ಅಡ್ಡಿಗಳನೆದಿರಿಸುವ
ನಿಮ್ಮ ಗಂಡೆದೆ ನಮಗೆ ಮೆಚ್ಚುಗೆ
ಕಣ್ಣಿದೂ ನಾವೇನೂ ಸಾಧಿಸಲಿಲ್ಲ
ಸಾಧಿಸಲಾರದಕ್ಕೆ ಹಲವು ಕಾರಣಗಳಿವೆ ನಮಗೆ
ನೀವು ಎಲ್ಲರಿಗೂ ಅಪವಾದ
ಹಲವು ಕಾರಣಗಳಿವೆ ನಿಮ್ಮ ಸಾಧನೆಗೆ
ನಿಮ್ಮನ್ನು ಕಂಡದ್ದು,ನಿಮ್ಮ ಜೊತೆ ಮಾತನಾಡಿದ್ದು
ಅದೇ ನಮ್ಮ ಸಾಧನೆಯಾಗಿದೆ
ನಿಮ್ಮ ಮಾತು,ನಿಮ್ಮ ನಡೆಗೆ
ನಿಮ್ಮ ಸಾಧನೆಗೆ ನೂರು ನಮನ
( ಡಾ ಸಂಗೀತಾ ರವರಿಗೆ ಸಮರ್ಪಣೆ. ಡಾ ಸಂಗೀತಾರವರು ಭಾರತೀಯ ಇತಿಹಾಸದ
ಮೊದಲ ಡಾಕ್ಟರೇಟ್ ಪಡೆದ ವಿಕಲಚೇತನ ( ಅಂಧ ಮಹಿಳೆ) ಮಹಿಳೆಯಾಗಿದ್ದಾರೆ.
ಅವರು ಕನ್ನಡದವರು,ಬೆಂಗಳೂರಿನವರೆಂಬುದು ನಮಗೆ ಹೆಮ್ಮೆ).
Thursday, November 4, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment