ಶರಣು ಎನ್ನಿ
ಶರಣು ಬನ್ನಿ
ದೇವನನ್ನು ಕಂಡಿರಾ
ಹಬ್ಬವು ಬಂತು
ಹರುಷವ ತಂತು
ಕಟ್ಟೋಣ ತಳಿರು-ತೋರಣಾ
ನನ್ನೊಳು ನೀನು
ನಿನ್ನೊಳು ನಾನು
ನಡೆಯುತಿದೆ ಪ್ರೇಮ-ಪ್ರಣಯಾ
ಅವನೇ ವಸಂತ
ಅದೇ ಕೋಗಿಲೆ
ಹಾಡುತಿದೆ ಸುಸ್ವರ-ಗಾಯನಾ
ನಾನು ನಾನೇ
ನೀನು ನೀನೇ
ಸಾಗಿಸುವೆವು ಹಸನಾದ ಬದುಕಾ
ನೋವು ಎನ್ನಿ
ನಲಿವು ಎನ್ನಿ
ಗಳಿಸಬೇಕು ಅನುಭವಾ
ಕತ್ತಲಿರಲಿ
ಬೆಳಕೇ ಇರಲಿ
ಸಾಗಬೇಕು ಜೀವನಾ
ಬದುಕಬೇಕು
ಬಾಳಬೇಕು
ತೀರಿಸಬೇಕು ಭುವಿಯ ಋಣವಾ
ನಾಳೆ ಏನೋ
ನಾಳಿದ್ದು ಎಂತೋ
ಇಂದೇ ಕಟ್ಟೋಣ ಗುರಿಯ ಕಡೆಗೆ ಕಂಕಣಾ
ಅವನು ಬಡವ
ಅವನು ಬಲ್ಲಿದ
ತೊಡೆದು ಹಾಕೋಣ ತಾರತಮ್ಯಾ
Thursday, November 4, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment