ಮಂಜು ಸುರಿಯುತ್ತಿದೆ
ಎದುರಿಗೆ ದಿಟ್ಟತನದಲಿ ಎದೆಗುಂಧದೆ ನಿಂತೆದೆ ಪರ್ವತಶ್ರೇಣಿ
ಕಗ್ಗತ್ತಲು ಕಣ್ಣಮುಂದೆ ಕಾನನವ ಆವರಿಸಿದೆ
ಕಣ್ಣ ಮುಚ್ಚಿದರೂ ನಿದ್ರೆ ಆವರಿಸದು
ಕಾಡಿದೆ ಮನದ ತುಂಬಾ ಸ್ವಾತಂತ್ರದ ಹಾಡು
ನಮ್ಮ ದೇಶ, ನಮ್ಮ ಭಾಷೆ
‘ವಂದೇ ಮಾತರಂ’ ಎದೆ ಎದೆಗಳಲ್ಲಿ ಕಿಚ್ಚುಹಚ್ಚಿದೆ
ಎಷ್ಟು ದಿನ ಗುಲಾಮಗಿರಿಯ ಶೋಷಣೆ?
ನಮ್ಮ ದೇಶ, ನಮ್ಮ ಮಣ್ಣು ನಾವೇ ನಮ್ಮ ಆಳುವೆವು
ದಿಕ್ಕು ದಿಕ್ಕುಗಳಲ್ಲಿ ಮೊಳಗಿತು ಸ್ವಾತಂತ್ರದ ಹಾಡು
ಸಾಲು ಸಾಲು ಜನರು
ತಾಯ ಗುಲಾಮಗಿರಿಯ ಬೇಡಿ ಕಳಚಲು
ತನು ಮನ ಪ್ರಾಣ ಮುಡಿಪಾಗಿಟ್ಟರು ನವ ಯೋಧರು
ಜಾತಿ ಮತ ಪಂಥಗಳ ಭೇದ ಭಾವ ತೊಲಗಿಸುತಾ
ನಾವೆಲ್ಲಾ ಭಾರತೀಯರೆಂಬ ಧೀರತೆಯ ಗೀತೆ ಮೊಳಗಿತು
ನಮ್ಮ ತಪ್ಪು ನಮ್ಮ ಒಪ್ಪು
ನಮಗೆ ನಾವೇ ವಿಮರ್ಶಕರು
ತಿದ್ದಿ-ತೀಡಿ, ಅಳಿಸಿ-ಬೆಳಸಿ ಹೊಸ ದಾರಿಯ ಹುಡುಕುವೆವು
ಶಾಂತಿ ಮಂತ್ರ ನಮ್ಮ ಶಕ್ತಿ
ಭಾಂದವ್ಯ ನಮ್ಮ ಯುಕ್ತಿ- ಪ್ರೇಮ ಗೀತೆ ಪಸರಿಸಲಿ
ನೂರು ಜನರು ಬರಲಿ
ಶರಣು ಬಂದವರಿಗೆ ತಾಯ ಆಸರೆ ಕಲ್ಪಿಸುವೆವು
‘ಬಂದೂಕು-ಖಡ್ಗ’ ಶಾಂತಿ ಮಂತ್ರ ಪಠಿಸದು
‘ಮತಾಂತರ-ಜಿಹಾದ್’ ಮೋಕ್ಷ ದೊರಕದು
ರಕ್ತ ಹರಿಯಲಿ ಸ್ವಾಭಿಮಾನ ಗೀತೆ ಉಳಿಯಲಿ
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment