ಪ್ರಿಯಮನ ಅರಸುತಲಿ
ಪ್ರಿಯತಮೆಯು ಅಲೆಯುತಿಹಳು
ಬಾನಿನಂಗಳದಲ್ಲಿ ಚಂದ್ರ
ತಾರೆಯರು ಮಿನುಗುತಿಹರು
ಏಕಾಂಗಿಯಾಗಿ ಬೃಂದಾವನದಲಿ
ನರಹರಿಯ ಸಂಗ ಬಯಸಿ ಬಂದಳು ರಾಧೆ
ಹುಡುಕುತಲಿ ನಡೆಯ
ಅವಳ ಕಾಲಿನ ಸ್ಪರ್ಶಕ್ಕೆ
ಮನಸೋತ ತರಗೆಲೆಗಳು
ಮನ್ಮಥಾನಂದವಾದಂತೆ ಜಾಗೃತವಾದವು
ಬಳುಕುತಲಿ ನಡೆಯೆ
ಗಿಡ ಮರಗಳು ಅವಳ ಸೌಂದರ್ಯಕ್ಕೆ
ಮಾರುಹೋಗಿ ಅವಳತ್ತ ಬಾಗಿ
ಚುಂಬನಕ್ಕೆ ಕರೆಯುತಿರುವಂತೆ ತೋರಿತು
ಹೂವಿನ ಮರಗಳು ಅವಳ
ಮೇಲೆ ಪುಷ್ಪಗಳನ್ನೆರಚಿದವು
ತಂಗಾಳಿಯ ಬೀಸಿ ಬೀಸಿ
ಅವಳ ಗಮನ ಸೆಳೆಯಲೆತ್ನಿಸಿದವು
ಅದಾವುದರ ಅರಿವೂ ಇಲ್ಲದೆ
ನರಹರಿಯ ಹುಡುಕುತಿಹಳು ರಾಧೆ
ನಡೆ ನಡೆದು ದಣಿವಾಗಿ
ಯಮುನಾ ತೀರದಲಿ ನೀರನ್ನು
ಕುಡಿಯುತಿರೆ ಬಾನಿನಲ್ಲಿಯ ಚಂದ್ರ
ಧರೆಗಿಳೆದು ಬಂದು ರಾಧೆಯ ಚುಂಬಿಸುವಂತೆ ಭಾಸವಾಯಿತು
ದೂರದಲಿ ಕಾಣಿಸಿತು ನರಹರಿಯ
ಬರುವು ನಲಿದಿತು ಮನ
ತನು ಬಳಲಿದ್ದರೂ ಮನವು ನರಹರಿಯ
ಬಯಸುತ್ತಿತ್ತು ಬೃಂದಾವನದಲೀ
ನೆನೆದೊಡೆ ಬಂದ ನರಹರಿಯ
ಬಾಹುಬಂಧನದಲಿ ಸಿಲುಕಿದಳು ರಾಧೆ
ಇವರ ಮಿಲನದಿಂದ
ಪುಲಕಿತಗೊಂಡ ವರುಣನು
ಕಾರ್ಮೋಡಗಳಿಂದ ಚಂದ್ರಮುಖಿಯ
ಬಳಸಲೋಡಿ ಬಂದನು
ಮಿಲನದ ಸಂತುಷ್ಟತೆಯ ಅನುಭವಿಸಿ
ಗುಡುಗು ಮಿಂಚುಗಳನ್ನೊಳಗೊಂಡು
ಧಾರಾಳವಾಗಿ ಮಳೆ ಸುರಿಯಿತು
ಇದಾವುದರ ಪರಿವೆಯೂ ಇಲ್ಲದೆ
ಇಬ್ಬರೂ ಒಲವಿನ ಸಾಗರದಲಿ
ಮದ್ಮೋನ್ಮತ್ತರಾದರು
ಇವರೀರ್ವರ ಮಿಲನವ ಕಂಡು
ಬಾಗಿದ್ದ ಮರಗಿಡಗಳು
ತರುಲತೆಗಳು ದಿಕ್ಕನು ಬದಲಿಸಿದವು
ನಾಚಿಕೆಯಿಂದಲಿ
ಹೂ ಗಿಡಗಳು ಪ್ರೇಮಿಗಳ
ಮೇಲೆ ಪುಷ್ಪಗಳನ್ನು ಸುರಿಸಿ
ವಾಸ್ತವೀಕತೆಯಿಂದ
ಬಹುದೂರ ಕರೆದೊಯ್ದವು
Thursday, November 11, 2010
Subscribe to:
Post Comments (Atom)
ಅಜೇಯ
ಕಾಳ ರಾತ್ರಿಯ ಕತ್ತಲು ನನ್ನ ಆವರಿಸಿ ಕಾಡಿದೆ , ಕಪ್ಪು ಕತ್ತಲು ಅಡಿಯಿಂದ ಮುಡಿಯವರೆಗೂ ಕಟ್ಟಿಹಾಕಿ . ಎಲ್ಲಾ ದೇವರುಗಳಿಗೂ ನನ್ನ ಅನಂತಾನಂತ ಧನ್ಯವಾದಗ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment