ಓ ಗೆಳೆಯನೇ ಒಮ್ಮೆ ಮನದ ಕನ್ನಡಿಯೊಳಗೀಕ್ಷಿಸು
ಮೊಗವ ಕಂಡು ಹೇಳ್ ಇದುವೆ ಸಮಯ ಭಾವವಿಡು ತನುಜನೊಳ್
ಭಾವ ತನುಜನೊಳ್ ಇಡೆನೆಂದಾದರೆ ನೀನ್
ಬಗೆಯುತಿಹೆ ದ್ರೋಹವ ಈ ಜಗಕ್ಕೆ ಮತ್ತು ಹೆಣ್ಣೊಬ್ಬಳ ಮಾತೃತ್ವಕ್ಕೆ ಅಪಚಾರ
ಯಾವ ಸುಂದರ ಹೆಣ್ಣಿಹಳು ಈ ಜಗದಲಿ
ಮಡಿಲು ತುಂಬದ ಅಸ್ಪೃಶ್ಯೆ
ಬಯಕೆ ತುಂಬಿ ಸುರತಿಯಿಂದಲಿ ಗರ್ಭವತಿಯಾಗದವಳು?
ಯಾರಿಹನು ಮೂರ್ಖನು ತನ್ನ ಗೋರಿಯ ಕಟ್ಟುವವನು?
ಸ್ವಾರ್ಥದಿಂದಲಿ ತಾನೇ ಮಣ್ಣು ಮುಕ್ಕುವವನು?
ನಿನ್ನ ತಾಯ ಪ್ರತಿಬಿಂಬವೇ ನೀನ್
ತಾಯಿ ಕಾಣುತಿಹಳು ನಿನ್ನ ತಾರುಣ್ಯದಲ್ಲಿ ಕಳೆದ ಮುಂಜಾವು
ನಿನ್ನ ಮುಸುಕಿದ ಕಂಗಳಲ್ಲೇ ನೀನ್ ನೋಡುವೆ
ಸುಕ್ಕುಗಟ್ಟಿದ ಮನಸ್ಸಿನಲ್ಲಿ ನಿನ್ನ ಹರೆಯದ ನಿನ್ನ ನೀನೆ
ನೀನು ಮರೆತರೆ ನಿನ್ನ ತನುಜರಲ್ಲಿ
ಏಕಾಂತದ ಸಾವು, ನಿನ್ನ ರೂಪ ನಿನ್ನಲ್ಲೇ ಕೊನೆಯುಸಿರೆಳೆಯುವುದು.
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment