Thursday, November 4, 2010

-ದಿನದ ಪುಟ-


ನೀನು ಬರುವೆಯೆಂದು ನಾ ಕಾಯುತ್ತಿದ್ದೆ
ನಿನ್ನ ಕಂಡು ಧನ್ಯತೆಯ ಪಡೆಯೋಣವೆಂದು

ಬೆಳಗಿನ ಸೂರ್ಯ ಕಣ್ಣುಬಿಟ್ಟಾಗ
ಮುಗಿಲು ಮೋಡಗಳ ಕಲೆಹಾಕಿ ನಿನಗಾಗಿ ಕಾಯುತ್ತಿತ್ತು
ನೀನು ಬರಲಿಲ್ಲವೆಂದು ತಾಳ್ಮೆ ಕಳೆದುಕೊಂಡಾಗ
ದುಃಖದ ಕಟ್ಟೆಯೊಡೆದು ಕಣ್ಣೀರು ಮಳೆಯಾಗಿ ಇಳಿಯುತ್ತಿತ್ತು

ಅದರ ದನಿಯು ನಿನಗೆ ಕೇಳಲಿಲ್ಲ
ನೀನು ಬರಲಿಲ್ಲ, ನನಗೆ ತಾಳ್ಮೆ ಕೆಡಲಿಲ್ಲ
ಬಾನ ಸೂರ್ಯ ಪಶ್ಚಿಮದಲ್ಲಿ ದಿನಕ್ಕೆ ತೆರೆ ಎಳೆಯುತ್ತಿದ್ದ
ಸಂಜೆಗೆಂಪು ಮುಗಿಲು ಮಳೆಯ ಶೃತಿಹಿಡಿದು ನಿನ್ನ ಕರೆಯುತ್ತಿದ್ದ

ಯಾವ ಹೆಸರಿನಿಂದ ನಿನ್ನ ಕರೆಯಲಿ?
ಯಾವ ಉಡುಗೊರೆಯ ನೀಡಿ ಗೌರವಿಸಲಿ
ಇಂದೆಲ್ಲವೂ ಭ್ರಮೆಯಂತೆ ಮನಕ್ಕೆ ಅನಿಸುತಿತ್ತು
ನೀನು ಬರಲಿಲ್ಲ,ಜೀವನದ ಈ ದಿನದ ಪುಟ ನಿನ್ನಹೆಸರಿಲ್ಲಿ ಬರೆಯಲಾಗಿತ್ತು

ನೂರು ನೆನಪುಗಳು ಮನದ ತೆರೆಯಲ್ಲಿ ತೆರೆದಿದೆ
ನೂರು ಅನಾಧಿಗಾನಗಳ ಸವಿನೆನಪುಗಳ ಹರಿಸಿದೆ
ಮಮತೆಯಿಂದಲಿ ನೀ ಕಲಿಸಿದ ಒಲವಿನ ನುಡಿಯಿದೆ
ನಿನ್ನ ಋಣವ ತೀರಿಸಲೆಂತೆಂದು ಮನವು ಎಣಿಸಿದೆ

ಈ ದಿನದಲ್ಲಿ ಏನೋ ವಿಶೇಷತೆಯಿದೆ
ನಾ ನಿನಗಾಗಿ ಕಾತರಿಸಿ ಕಾಯುತ್ತಿದ್ದೆ
ಬೇಸರವಿಲ್ಲ ನೀನು ಬರಲಿಲ್ಲವೆಂದು
ನಿನ್ನ ಮಧುರಗೆಳೆತನದ ಮುತ್ತುಗಳನ್ನು ಈ ದಿನದ
ಪುಟಗಳಲ್ಲಿ ಬರೆದೆನೆಂದು

No comments:

Post a Comment

ಅಪರಿಚಿತ ಅತಿಥಿ

  ಬಾ , ಓ   ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।।   ಚಳಿಗಾಳಿ ಹೆದರಿ ಓಡಿಹೋ...