Wednesday, October 27, 2010
-ಗೋಡೆಯ ಮೇಲಿನ ಕಿಟಕಿ-
ಚಿಕ್ಕವನಿದ್ದಾಗ ಕಿಟಕಿಯಿಂದ ಹೊರ ಜಗತ್ತನ್ನು ನೋಡಬೇಕೆಂದು
ತುಂಬಾ ಇಷ್ಟಪಡುತ್ತಿದ್ದೆ.
ಬೆಳಿಗ್ಗೆ ಎದ್ದತಕ್ಷಣ ಪೂರ್ವದಿಕ್ಕಿನ ಆ ಆಗಸವನ್ನು ನೋಡುತ್ತಾ
ನನ್ನದೇ ಕನಸಿನ ಲೋಕಕ್ಕೆ ಹಾರುತ್ತಿದ್ದೆ.
ಚಿನ್ನದ ತೇರಿನ ರವಿಯ ಆಗಮನ ಮನಕ್ಕೆ ಮುದಕೊಡುತ್ತಿತ್ತು
ಕನ್ನಡದ ಗುರುಗಳು ಹೇಳುತ್ತಿದ್ದ ಮಾತು " ಬೆಳಿಗ್ಗೆ ತದೇಕ ದೃಷ್ಟಿಯಿಂದ
ಸೂರ್ಯನ್ನನ್ನು ನೋಡಿದರೆ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ"
ರಕ್ತವರ್ಣವನ್ನು ಚೆಲ್ಲುತ್ತಾ ಕತ್ತಲನ್ನು ಓಡಿಸುತ್ತಾ ಬರುವ ಸೂರ್ಯನನ್ನು
ನೋಡೋದೆ ಒಂದು ಆನಂದ.
ಬೆಳಗಿನ ಮಂಜಿನ ಆಟ ಸುಂದರ ಹಾಗೂ ಮನೋಹರ.
ಬೆಳಿಗ್ಗೆ ೭.೦೦ ಗಂಟೆಗೆ ಬೆಂಗಳೂರಿನ ಕಡೆಗೆ ಓಡುವ ರೈಲನ್ನು ನೋಡಲು
ತುದಿಗಾಲಲ್ಲಿ ನಿಂತಿರುತ್ತಿದ್ದೆ,
ಕಪ್ಪು ಹೊಗೆಯನ್ನು ಚೆಲ್ಲುತ್ತಾ ಆಕಾಶವನ್ನು ಗಲೀಜು ಮಾಡುತ್ತಾ,
ಆರ್ಭಟಮಾಡುತ್ತಾ ೬ ಬೋಗಿಗಳ ರೈಲು ಕ್ಷಣ ಮಾತ್ರದಲ್ಲಿ ಕಿಟಕಿಯಿಂದ
ಕಾಣೆಯಾಗುತ್ತಿತ್ತು.
ಬೆಳಿಗ್ಗೆ ಹಾಲಿನವನ ಆಗಮನವನ್ನು ಕಾಯುವುದು,
ಗುರುತಿನ ಗೆಳೆಯ ಬೆಳಗಿನ ಟ್ಯೂಷನ್ ಗೆ ತೆರಳುವ ನೋಟ
ಆಪ್ಯಾಯಮಾನವಾಗಿತ್ತು.
ಈಗ ಪರಿಸ್ಥಿತಿ ಬದಲಾಗಿದೆ, ಸೂರ್ಯ ಕಿಟಕಿಯಿಂದ ಕಾಣಿಸೋದಿಲ್ಲ
ಸುತ್ತಲೂ ಕಾಂಕ್ರೀಟ್ ಕಾಡು ಬೆಳೆದಿದೆ
೭.೦೦ ಗಂಟೆಯ ರೈಲಿನ ಶಬ್ದಮಾತ್ರ ಕೇಳಿಸಿತ್ತದೆ
ಬೆಳಗಿನ ಆ ಮನೋಹರ ದೃಶ್ಯ ಕಾಣೋದಿಲ್ಲ
ಬರೀ ಶಬ್ದ, ಮಾಲಿನ್ಯ ಮಾತ್ರ ಕಣ್ಣಮುಂದಿದೆ
ಮನದಲ್ಲಿ ಬೇಸರದ ಛಾಯೆ ಆವರಿಸಿದೆ.
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment