Monday, November 19, 2018

ಬಚ್ಚಿಟ್ಟ ಭಾವ

ಯಾರು ನೆನಪಿಡುವರು?
ಮುಂದೆ ಕಾಲ ಉರುಳುತಿರುವುದ
ಯಾರು ನಂಬುವರು?
ಈ ನನ್ನ ಪದಗಳ......
ಗೊತ್ತಿದೆಯಾದರೂ ನೋವಿಲ್ಲ
ಗೋರಿಯೊಳಗೆ ಬಚ್ಚಿಟ್ಟ ಭಾವಗಳಂತೆ
ಯಾರೂ ಬಗೆದು ನೋಡುವರಿಲ್ಲ
ಹಳೆಯದೆಲ್ಲವೂ ಇತಿಹಾಸ
ಹೊಸತೆಲ್ಲವೂ ಅನ್ವೇಷಣೆ
ಹಿಂದಿನದೆಲ್ಲವೂ ಕಥೆಗಳ ಗಂಟು
ನಂಬುವರಾರು? ಗೊಡ್ಡು ವೇದಾಂತ;
ನಡೆಯುತ್ತಿರುವರು ಸತ್ಯ ಹರಿಶ್ಚಂದ್ರರು
ಮಾತಿಗೆ ಬೆಲೆಯಿಲ್ಲ, ಬರೀ ಒಣ ವೇದಾಂತ;
ಎಲ್ಲರೂ ಚಪ್ಪಾಳೆ ತಟ್ಟುವವರೇ!
ತಪ್ಪೆಂದು ಹೇಳಬೇಕಾದವರು ತೆಪ್ಪಗಿಹರು
ಮೂಕರಾಗಿ, ನಿಜವಲ್ಲ ಬರೀ ನಾಟಕ;
ಮುನ್ನಡೆಯುತಿಹುದು ಕಾಲ ಗಹಗಹಿಸಿ
ಮುಂದೆ ಕಾದಿದೆ....
ಮುಂದೆ ಕಾದಿದೆ...
ಕಾಣದ ರುದ್ರನರ್ತನ.......

2 comments:

  1. 99%ಕನ್ನಡ, 1%ಇತರೆ ಕನ್ನಡ ಕಂದನ ಕನ್ನಡದ ತಾಣ ಅದುವೇ www.spn3187.blogspot.in & https://t.me/spn3187 ಕನ್ನಡವನ್ನು ಕನ್ನಡಿಗರೇ ಬೆಳೆಸದಿದ್ದರೆ ಮತ್ಯಾರು ಬೆಳೆಸುವರು ಅದಕ್ಕೆ ನಮ್ಮ ಕನ್ನಡವನ್ನು ನಾವು ಬೆಳೆಸಲು ಚಿಕ್ಕ ಪ್ರಯತ್ನ ಜೈ ಕನ್ನಡಾಂಬೆ

    ReplyDelete

ಸ್ವಾರ್ಥ ಸಾಧನೆ

 ಕೆರೆಗಳೆಲ್ಲಿ! ಗುಡ್ಡಗಳೆಲ್ಲಿ! ಇಲ್ಲಿ ಎಲ್ಲವೂ ಬೆತ್ತಲಾಗಿವೆ|  ಯಾರದೋ ಹೊಟ್ಟೆಯ ಹಸಿವಿಗೆ  ನಿತ್ಯ ಬಲಿಪಶುಗಳಾಗಿವೆ||  ಮರಗಿಡಗಳೆಲ್ಲಿ! ಪ್ರಾಣಿ -ಪಕ್ಷಿಗಳೆಲ್ಲಿ! ಕಾಣ...