ಕೆರೆಗಳೆಲ್ಲಿ?, ಗುಡ್ಡಗಳೆಲ್ಲಿ?
ಇಲ್ಲಿ ಎಲ್ಲವೂ ಬೆತ್ತಲಾಗಿವೆ|
ಯಾರದೋ ಹೊಟ್ಟೆಯ ಹಸಿವಿಗೆ
ನಿತ್ಯ ಬಲಿಪಶುಗಳಾಗಿವೆ||
ಮರಗಿಡಗಳೆಲ್ಲಿ?, ಪ್ರಾಣಿ-ಪಕ್ಷಿಗಳೆಲ್ಲಿ
ಕಾಣ ದೂರಿಗೆ ವಲಸೆ ಹೋಗಿವೆ|
ನಮ್ಮಯ ಸ್ವಾರ್ಥ ಸಾಧನೆಗೆ
ತಮ್ಮಯ ಬಲಿಗೊಟ್ಟಿವೆ||
ಮಳೆಯಿಲ್ಲ, ಬೆಳೆಯಿಲ್ಲ,
ಆರ್ತನಾದ ಮುಗಿಲು ಮುಟ್ಟಿದೆ|
ಅಜ್ಞಾನವು ಮೇಳೈಸಿರೆ
ಸರ್ವನಾಶವು ಮುಂದೆ ಕಾದಿದೆ||
ನೀರಿಲ್ಲ, ನೆರಳಿಲ್ಲ,
ಬಿಸಿಲ ಬೇಗೆ ಎಲ್ಲೆ ಮೀರಿದೆ|
ಪರಿಸರ ಸಂರಕ್ಷಿಸದೇ
ಮುಂದಿನ ಪೀಳಿಗೆಗೆ ಭವಿಷ್ಯವೆಲ್ಲಿದೆ?।।
No comments:
Post a Comment