ಒಲುಮೆಯಿಂದ ಹಾರೈಸು,
ಬಾಳು ಬೆಳಗಲೆಂದು.
ಹಾತೊರೆಯುವ ಮನಕೆ,
ದೀವಿಗೆಯಾಗಲಿ ನಿನ್ನ ಹಾರೈಕೆ.
ಸೋತು ಬಳಲಿ ಬೆಂಡಾಗಿರಲು,
ಸಾಂತ್ವನದ ಮಾತುಗಳು ಬೇಕಾಗಿದೆ.
ಹಾರೈಸುವ ಮನಗಳ ಮಾತು,
ಕೇಳಲು ಬಯಸುವುದು ಈ ಹೃದಯ.
ಕೋಪ,ತಾಪ, ಸಿಟ್ಟು, ಸೊಡರುಗಳು,
ಮನವ ಆವರಿಸಿರಲು ದಿಕ್ಕುಗಾಣದಾಗಿದೆ.
ಆಸರೆ, ಆಶ್ರಯವು ಅಗತ್ಯವಾಗಿರಲು,
ಯಾರ ಬಳಿ ತೆರಳಿ ಶಾಂತಿಗಾಣುವುದೋ.
ಕಾಲ ಉರುಳಿತು ಮಾಸಿ ಗಾಯಗಳ,
ಮುಂದೆ ಸಾಗಬೇಕು ಎಲ್ಲಾ ಮರೆತು.
ಕಾಣುವುದು ಬಹಳಿದೆ ಬದುಕಿನಲಿ,
ಸಂಕಷ್ಟಗಳಿಗೆ ಮುರುಟದಿರು ಮನವೇ!.
ನಮ್ಮ ಸಮಯ ಕಾದಿದೆ,
ಕುತೂಹಲದಿ ಸಾಗಬೇಕಿದೆ.
ತವಕವಿದೆ ಸಂತೋಷ ಕಾಣಲು,
ಪಯಣದ ಹೆಜ್ಜೆ, ಗುರಿಯ ತಲುಪಬೇಕಷ್ಟೇ.
No comments:
Post a Comment