Sunday, August 24, 2025

ಮನದೊಳಗಿನ ಯುದ್ಧ

ಮನದೊಳು ನಡೆಯುತ್ತಿದೆ ನೂರು ಕದನ

ಹೋರಾಡುತ್ತಲೇ ಇದ್ದೇನೆ ದಶಕಗಳಿಂದ

ಮತ್ತೆ ಮತ್ತೆ ಮನಸ್ಸು ಜರ್ಜರಿತ

ಒಂದು ಅವಕಾಶ!,

ಮತ್ತೊಂದು ಪುಳಕ!,

ಸೋತು ನೀರಾಗಿಲ್ಲ ನಾನು!

ನಿರಾಶಾವಾದಿಯೂ ಅಲ್ಲ,

ಸೋತೆನೇದು ಫಲಾಯನಗೈವುದೂ ಇಲ್ಲ,

ಪ್ರಯತ್ನ ನಿರಂತರ ಉಸಿರು ನಿಲ್ಲುವವರೆಗೂ ।।

No comments:

Post a Comment

ಅಜೇಯ

ಕಾಳ ರಾತ್ರಿಯ ಕತ್ತಲು ನನ್ನ ಆವರಿಸಿ ಕಾಡಿದೆ , ಕಪ್ಪು ಕತ್ತಲು ಅಡಿಯಿಂದ ಮುಡಿಯವರೆಗೂ ಕಟ್ಟಿಹಾಕಿ . ಎಲ್ಲಾ ದೇವರುಗಳಿಗೂ ನನ್ನ ಅನಂತಾನಂತ ಧನ್ಯವಾದಗ...