ನಾನು ವೀಣೆ,
ಅವನು ವೈಣಿಕ,
ಸಂಗೀತವೇ ನಮ್ಮ ಜೀವನ||
ನಾನು ಜೀವ,
ಅವನು ದೈವ,
ಹೊಮ್ಮಲಿ ಗಂಧರ್ವ ಗಾನ।।
ನಾನು ದಾರಿ,
ಅವನೇ ಗುರಿ,
ನಡೆವ ಹಾದಿಯೇ ಸ್ವರ್ಗ||
ನಾನು ನಿಮಿತ್ತ,
ಅವನು ಅನಂತ,
ಅವನೇ ಅಂತಿಮ ಗುರಿ||
ನಾನು ಅವನ ಇರುವಿಕೆಗೆ ಅಕ್ಷಿ,
ಅವನು ನನ್ನ ಇರುವಿಕೆಗೆ ಸಾಕ್ಷಿ||
ನಾನು ವೀಣೆ,
ಅವನು ವೈಣಿಕ,
ಸಂಗೀತವೇ ನಮ್ಮ ಜೀವನ||
ನಾನು ಜೀವ,
ಅವನು ದೈವ,
ಹೊಮ್ಮಲಿ ಗಂಧರ್ವ ಗಾನ।।
ನಾನು ದಾರಿ,
ಅವನೇ ಗುರಿ,
ನಡೆವ ಹಾದಿಯೇ ಸ್ವರ್ಗ||
ನಾನು ನಿಮಿತ್ತ,
ಅವನು ಅನಂತ,
ಅವನೇ ಅಂತಿಮ ಗುರಿ||
ನಾನು ಅವನ ಇರುವಿಕೆಗೆ ಅಕ್ಷಿ,
ಅವನು ನನ್ನ ಇರುವಿಕೆಗೆ ಸಾಕ್ಷಿ||
ಏಕೆ ಗೊಂದಲವೋ?
ಮೌನವಾಗಿರುವಾಗ!
ಕವಿತೆ ಬರೆವಾಗಲೂ!
ಯೋಚಿಸಿದೆ ಸತತವಾಗಿ
ಎಲ್ಲಾ ಕೋನ, ಕೊನರುಗಳಿಂದ
ಸ್ಪಷ್ಟಚಿತ್ರ ಮನದಲ್ಲಿ ಮೂಡಲೆಂದು.
ದಾರಿ ಸ್ಪಷ್ಟವಾಗಿದೆಯೆಂದು
ಹೆಜ್ಜೆಯಿಟ್ಟೆ ಗುರಿಯ ಕಡೆಗೆ
ಆದರೆ ಆ ದಾರಿ ನನ್ನದಾಗಿರಲಿಲ್ಲ.
ಏನೋ ಅಂದುಕೊಂಡೆ, ಆದದ್ದೇನೋ!
ಗೊಂದಲದ ಗೂಡಾಗಿದೆ
ತಿಮಿರದ ಮನೆಯಾಗಿದೆ
ಈ ಮನ ಅಸ್ಪಷ್ಟ ಚಿತ್ರ ಕೂಟ
ಕವಿತೆಯಾಗಿದೆ ಮನದ ಭಾವವೆಲ್ಲಾ
ಬಿಡಲಾರೆ, ತೊರೆಯಲಾರೆ
ಜೊತೆಗೆ ನಡೆಯುವೆ,
ಮೌನವಾಗಿರುವಾಗಲೂ .......
ಕವಿತೆ ಬರೆವಾಗಲೂ ......
ಬೆಳಕನು ನುಂಗುತ್ತಾ,
ಕತ್ತಲೆಯು
ಎಲ್ಲೆ ಮೀರಿತ್ತು!,
ಕಾಡು ನಾಡೆನ್ನದೆ,
ಎಲ್ಲವ
ಬಳಸಿ ಆವರಿಸಿತ್ತು,
ಮೌನವು ಎಲ್ಲೆಡೆ
ಸಂತಸದಿ ತಾ ಮಾತನಾಡಿತ್ತು,
ಕತ್ತಲೊಳು
ಎಲ್ಲವೂ ಲಯವಾದುವು,
ಇಹ
ಪರಗಳು ಎರಡೂ ಒಂದಾದುವು,
ಮನದೊಳು
ಎದ್ದ ಭಾವದಲೆಗಳು,
ಏಳು, ಎದ್ದೇಳು!
ಆಗಸವ ನೋಡು,
ಕೊನೆಯಿಲ್ಲದ ಅನಂತನೆಡೆಗೆ ನೋಡು,
ಚೈತನ್ಯದ ಸೊಬಗ ತರುತ್ತಿರುವ ಆಕಾಶದೆಡೆಗೆ ನೋಡು,
ಜಗದ ನೋವುಗಳ ದಾಟಿ ನಡೆ,
ಮೌನ ಸಾಗರವನೇ ಹೊತ್ತು,
ನಿಲ್ಲದೇ ನಡೆಯುವುದ ಕಲಿ,
ಗುರಿ ಮುಟ್ಟುವವರೆಗೂ ಇರಲಿ ಛಲ,
ನಡೆದಷ್ಟೂ ಸಂತೋಷದ ಭಾವಗಳು ಉಕ್ಕಲಿ,
ನಡೆಯಬೇಕು ಮೈಲುಗಳ ಧಣಿವರಿಯದೆ,
ಜೊತೆಗೆ ತುಟಿಯ ಮೇಲೆ ನಗುವಿರಲು,
ಎಲ್ಲ ಗೆಲುವುಗಳು, ಎಲ್ಲ ಕದನಗಳು ನನ್ನದೇ!||
ಮತ್ತೆ ಇಲ್ಲ, ಮತ್ತೆಂದೂ ಇಲ್ಲ,
ಮತ್ತೆಂದೂ ಹೃದಯವ ನೋಯಿಸಲಾರೆ;
ನಾನಂದು ಕೊಂಡ ಜೀವನ ನನ್ನದಾಗದೇ?
ಹಿಂಸಿಸುವ ಮಾತುಗಳ ಕೇಳಿ ರೋಸಿಹೋಗಿದ್ದೇನೆ.
ಮತ್ತೆ ಇಲ್ಲ, ಮತ್ತೆಂದೂ ಇಲ್ಲ, ಕೇಳಿಸಿಕೊಳ್ಳಲಾರೆ.
ಹೃದಯದ ಅಂತರಾತ್ಮದ ಕರೆಯ ಕೇಳಿಸಿಕೊಳ್ಳುತ್ತಿದ್ದೇನೆ.
ಎಚ್ಚೆತ್ತಿದ್ದೇನೆ, ನನ್ನ ದೈವತ್ವದ ದಾರಿಯ ಗೋಚರವಾಗಿದೆ.
ನನ್ನ ಹಳೆಯ ಸರುಕುಗಳ ಗಂಟು ಕಟ್ಟಿದ್ದೇನೆ,
ನನ್ನದೆಂದುಕೊಂಡ ಎಲ್ಲವನ್ನೂ ಹೊತ್ತಿದ್ದೇನೆ.
ಎಲ್ಲರೂ ಮಲಗಿದ್ದಾರೆ, ನಡುರಾತ್ರಿಯ ಕತ್ತಲು,
ನಾ ನಡೆವ ದಾರಿಯಲ್ಲಿ ಮಾತ್ರ ಬೆಳಕು,
ನಡೆದದ್ದು ಬಹಳ ಮೈಲಿಗಳು, ಬೇಸರವಿಲ್ಲದೆ!
ಹೊಸ ಬೆಳಕು ಕಾಣುತ್ತಿದ್ದೇನೆ - ನನ್ನ ದಾರಿಯಲ್ಲಿ.
ನಾ ಕಂಡ ಕನಸಿನ ದಾರಿಯಲ್ಲಿ.
ಯಾವ ಕರೆಗೋ!,
ಯಾವ ಕಡೆಗೋ! ।
ಹೊರಳುವುದು ಮನ,
ಕೇಳಿ ಕಾಣದರಿಯದ ಗಾನಕೆ ।।
ಕರಗುವುದು ಮನ,
ಕೆರಳುವುದು ಮನ|
ನಿದ್ದೆಯಲ್ಲೂ ಕಾಡುವುದು,
ಕಂಡು ಕೇಳರಿಯದ ರಾಗಕೆ||
ಮನವ ಶೋಧಿಸುವುದು,
ದಿಕ್ಕುಗಾಣದೆ ಓಡಿಹುದು|
ಯುದ್ಧದ ಸೆರೆಯಾಳಾಗಲೇ?,
ಇಲ್ಲ, ಇನಿದನಿಗೆ ಶರಣಾಗಲೇ?।।
ಯಾವ ಕರೆ?, ಯಾವ ಕಡೆ?,
ಯಾವ ಗಾನ?, ಯಾವ ರಾಗ?।
ಮನ ಸೋತಿಹೆ ಆ ಅನಂತ ನಾದಕೆ,
ತಲೆದೂಗುತಿಹೆ ಮೌನ ರಾಗಕೆ||
ಕೆರೆಗಳೆಲ್ಲಿ?, ಗುಡ್ಡಗಳೆಲ್ಲಿ?
ಇಲ್ಲಿ ಎಲ್ಲವೂ ಬೆತ್ತಲಾಗಿವೆ|
ಯಾರದೋ ಹೊಟ್ಟೆಯ ಹಸಿವಿಗೆ
ನಿತ್ಯ ಬಲಿಪಶುಗಳಾಗಿವೆ||
ಮರಗಿಡಗಳೆಲ್ಲಿ?, ಪ್ರಾಣಿ-ಪಕ್ಷಿಗಳೆಲ್ಲಿ
ಕಾಣ ದೂರಿಗೆ ವಲಸೆ ಹೋಗಿವೆ|
ನಮ್ಮಯ ಸ್ವಾರ್ಥ ಸಾಧನೆಗೆ
ತಮ್ಮಯ ಬಲಿಗೊಟ್ಟಿವೆ||
ಮಳೆಯಿಲ್ಲ, ಬೆಳೆಯಿಲ್ಲ,
ಆರ್ತನಾದ ಮುಗಿಲು ಮುಟ್ಟಿದೆ|
ಅಜ್ಞಾನವು ಮೇಳೈಸಿರೆ
ಸರ್ವನಾಶವು ಮುಂದೆ ಕಾದಿದೆ||
ನೀರಿಲ್ಲ, ನೆರಳಿಲ್ಲ,
ಬಿಸಿಲ ಬೇಗೆ ಎಲ್ಲೆ ಮೀರಿದೆ|
ಪರಿಸರ ಸಂರಕ್ಷಿಸದೇ
ಮುಂದಿನ ಪೀಳಿಗೆಗೆ ಭವಿಷ್ಯವೆಲ್ಲಿದೆ?।।
ಯುದ್ಧ ಕೊನೆಗೊಳ್ಳುವುದು,
ನಾಯಕರು ಕೈ ಕುಲುಕುವರು;
ವಯಸ್ಸಾದ
ತಾಯಿ ಕಾಯುತ್ತಿರುತ್ತಾಳೆ,
ಹುತಾತ್ಮನಾದ ಮಗ ಬರುವನೆಂದು;
ಆ ಯುವತಿಯೂ ಕಾಯುತ್ತಿರುತ್ತಾಳೆ,
ಪ್ರೀತಿಯ ಗಂಡ ಮರಳಿ ಬರುವನೆಂದು;
ಒಹ್! ಆ ಮಕ್ಕಳೂ ಕಾಯುತ್ತಿರುತ್ತಾರೆ,
ತಮ್ಮ ಜೀವನದ ನಾಯಕ ಬರುವನೆಂದು;
ನಮ್ಮ ತಾಯ್ನಾಡನ್ನು ಯಾರು
ಒತ್ತೆಯಿಟ್ಟರೋ ಗೊತ್ತಿಲ್ಲ;
ಆದರೆ,
ಯಾರು ಬೆಲೆ ಕಟ್ಟಿದರೆಂದು ನಾಬಲ್ಲೆ; ||
ನಡೆಯುತ್ತಿದ್ದೇನೆ ನನ್ನದಲ್ಲದ ದಾರಿಯಲ್ಲಿ,
ಅನಿವಾರ್ಯತೆಗೆ ಕಟ್ಟಿದೆ ಕೈ, ಕಾಲು,
ಕಾಣದ ಬಿಗಿಯಾದ ದಾರದಲ್ಲಿ.
ಎಷ್ಟು ದೂರ ಕ್ರಮಿಸಿದ್ದೇನೋ? ಪ್ರಶ್ನಾರ್ಥಕ?
ಇನ್ನೆಷ್ಟು ದೂರ ಕ್ರಮಿಸಬೇಕೋ? ತಿಳಿದಿಲ್ಲ, ಅನಂತ!
ಗುರಿ ಯಾವುದು?, ಕೊನೆ ಯಾವುದು?
ಗುರಿಯಿಲ್ಲದ ಹಾದಿಯಲ್ಲೇ ಕಳೆದುಹೋಗಿದ್ದೇನೆ.
ಬೇಸರವಿಲ್ಲ ಆದರೆ, ಅನಾಥ ಪ್ರಜ್ಞೆಯಷ್ಟೇ
ಮನಸ್ಸೂ ಅಷ್ಟೇ , ಜಡಗಟ್ಟಿದೆ.
ಬೇಸರವಿಲ್ಲದೆ ಮುನ್ನಡೆಯಬೇಕಷ್ಟೇ .
ಅದೇ ಶಿಸ್ತು, ಕಾಣುವುದೆಲ್ಲವ ಕಾಣಬೇಕು,
ಯಾವುದರಲ್ಲಡಗಿದೆಯೋ ನನ್ನ ಗುರಿ,
ನೂರು ದಾರಿಯ ಕ್ರಮಿಸುವ ವಿಶ್ವಾಸವಿದೆ.
ಶಕ್ತಿ ಅವನೇ ನೀಡಬೇಕಷ್ಟೇ,
ಗುರಿಯಿಲ್ಲದ ಅನಂತ ದಾರಿಯ ನಡೆವ ತವಕ||
ನಾನು ವೀಣೆ, ಅವನು ವೈಣಿಕ, ಸಂಗೀತವೇ ನಮ್ಮ ಜೀವನ || ನಾನು ಜೀವ, ಅವನು ದೈವ , ಹೊಮ್ಮಲಿ ಗಂಧರ್ವ ಗಾನ।। ನಾನು ದಾರಿ, ಅವನೇ ಗ...