Saturday, August 30, 2025

ಅಜೇಯ

ಕಾಳ ರಾತ್ರಿಯ ಕತ್ತಲು ನನ್ನ ಆವರಿಸಿ ಕಾಡಿದೆ,

ಕಪ್ಪು ಕತ್ತಲು ಅಡಿಯಿಂದ ಮುಡಿಯವರೆಗೂ ಕಟ್ಟಿಹಾಕಿ.

ಎಲ್ಲಾ ದೇವರುಗಳಿಗೂ ನನ್ನ ಅನಂತಾನಂತ ಧನ್ಯವಾದಗಳು,

ಕೊಟ್ಟಿಹರೆನಗೆ ಆಶೀರ್ವದಿಸಿ ಅಜೇಯ ಆತ್ಮಶಕ್ತಿಯನ್ನು.

 

ಸನ್ನಿವೇಶ ಪ್ರತಿಕೂಲ ಪರಿಸ್ಥಿತಿಗಳ ಒತ್ತಡದಲ್ಲಿಯೂ,

ಎದೆಗುಂದಲಿಲ್ಲ ಅಥವಾ ಅಸಹಾಯಕನಾಗಿ ಅಳಲಿಲ್ಲ ನಾನು.

ಅವಕಾಶದಲೆಗಳ ಹೊಡೆತಕ್ಕೆ ನಲುಗಿದೆ ಬಳಸಿಕೊಳ್ಳಲಾಗದೆ,

ಯೋಚನೆ,ಚಿಂತೆ ನೂರಾರು ತಲೆಯಲ್ಲಿ, ಎದೆಗುಂದಲಿಲ್ಲ ನಾನು.

 

ಪರಾಜಯ, ಅವಮಾನಗಳ ಸಮಯದಲ್ಲಿ,

ಅಸಹಾಯಕತೆ ಮೈ-ಮನಗಳ ಕಟ್ಟಿಹಾಕಿದೆ.

ಇನ್ನೂ ಹಲವು ವರುಷಗಳ ಹಾದಿ ಬಾಕಿಯಿದೆ,

ನನ್ನ ನಾನು ಕಂಡುಕೊಳ್ಳಲು ಧೈರ್ಯಗೆಡದೆ ನಡೆಯಬೇಕಿದೆ.

 

ನನ್ನ ದಾರಿ ಎಷ್ಟು ನೆರವಾಗಿದೆಯೆಂಬುದು ಮುಖ್ಯವಲ್ಲ,

ಹಾದಿಯಲ್ಲಿ ನಡೆವಾಗ ಎಷ್ಟು ಅನುಭವ ಪಡೆದೆನೆಂಬುದು ಸತ್ಯ.

ನನ್ನ ಗುರಿಗೆ ನಾನೇ ಕಾರಣ, ಬೇರೆ ಯಾರ ಹೀಗೆಳೆಯಲಿ,

ಅವರದಲ್ಲ ತಪ್ಪು, ನಾನು ನಡೆದದ್ದೇ ಹಾದಿ, ನನಗೆ ನಾನೇ ನಾಯಕ.

No comments:

Post a Comment

ಅಜೇಯ

ಕಾಳ ರಾತ್ರಿಯ ಕತ್ತಲು ನನ್ನ ಆವರಿಸಿ ಕಾಡಿದೆ , ಕಪ್ಪು ಕತ್ತಲು ಅಡಿಯಿಂದ ಮುಡಿಯವರೆಗೂ ಕಟ್ಟಿಹಾಕಿ . ಎಲ್ಲಾ ದೇವರುಗಳಿಗೂ ನನ್ನ ಅನಂತಾನಂತ ಧನ್ಯವಾದಗ...