Wednesday, September 24, 2025

S. L. ಭೈರಪ್ಪ - ಕನ್ನಡ ದೀಪಸ್ತಂಭ

 

ಸಂತೆಶಿವರದ ಮಣ್ಣಲ್ಲಿ ಮೊಳಕೆಯೊಡೆದ ಕರುನಾಡ ಬೆಳಕು,

ಕಷ್ಟಗಳ ಬೆಂಕಿಯಲ್ಲಿ ಬೆಂದುದಿಸಿದ ಕನ್ನಡ ರತುನ,

ಪುರಾಣದ ಪಥದಲ್ಲಿ ಮಾನವ ಸಂಬಂಧ ಗಳ ಹುಡುಕಾಟ,

ಕಾದಂಬರಿಗಳಲ್ಲಿ ಹರಡಿದ ಕಲಾನದಿಯ ಹರಿವಿನ ಒಡನಾಟ.

 

ವಂಶವೃಕ್ಷದ ಬೇರು, ದಾಟುವ ದಾರಿ, ಸಂಗೀತದ ಮಂದ್ರ,

ಪರ್ವದ ಶಿಖರ, ತಂತುವಿನ ತಂತಿ, ಹೊಸ ದಿಕ್ಕಿನ ಕವಲು.

ಆವರಣದ ಒಳಗಿಂದ ಹೊರಬರುವ ಆತಂಕದ ನುಡಿ,

ಭಾವನೆಗಳ ಜಗತ್ತಿಗೆ ತಂದ ಹೊಸ ಬಿಂಬಗಳ ಪರಿವಿಡಿ.

 

ಅಕಾಡೆಮಿಯ ಪ್ರಶಸ್ತಿ ದಾಟುವ ದೀಪ ಯಾನ,

ಸರಸ್ವತಿ ಸಮ್ಮಾನದಿಂ ಹೊಳೆದ ಕನ್ನಡದ ತಾರೆ.

ಪದ್ಮಶ್ರೀ, ಪದ್ಮಭೂಷಣ – ರಾಷ್ಟ್ರ ಗೌರವದ ನಿನಾದ,

ಭೈರಪ್ಪ ಕನ್ನಡದ ಹೆಮ್ಮೆ, ಕನ್ನಡ ಭಾಷೆಯ ಜಾಗೃತಿ.

 

ಕಾದಂಬರಿಗಳಲ್ಲಡಗಿದೆ  ಜೀವನ ದರ್ಶನ, ತತ್ವದ ಬೆಳಕು,

ಬರಹದ ನುಡಿಗಳಲ್ಲಿ ನಾಡು ಕಂಡಿದೆ ತನ್ನ ಪ್ರತಿಬಿಂಬ.

ಭೈರಪ್ಪ – ಕನ್ನಡ ಸಾಹಿತ್ಯದ ಶ್ರೇಷ್ಠ ತೇಜೋವಂತ,

ನವ ಚಿಂತನದ ಚಿರ ಚಿರಂತನ ಕನ್ನಡ ದೀಪಸ್ತಂಭ.

No comments:

Post a Comment

ಬಾಂದಳದ ತಾರೆಗಳು

ಬಾಂದಳದಲ್ಲಿ ತಾರೆಗಳ ಹೂ ಅರಳಿದೆ, ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ. ಮನದ ಬಾಂದಳದಿ ಸಾವಿರ ವಿಚಾರಗಳಿವೆ, ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ. ಆ ತಾರೆಗಳು ಸ್ವತಂ...