Friday, September 19, 2025

ಬಂಗಾರದ ದಿನಗಳು!

 

ಹೇ ಗೆಳೆಯ, ನಿನ್ನ ಜೊತೆಗೂಡಿ ಆಡಿದ ಆ ಧೂಳು ಎಲ್ಲಿಹುದು?
ಮಣ್ಣಿನಲಿ ನಗು, ಆಟ, ಹಬ್ಬ,
ಎಲ್ಲಾ ಮರೆಯಾಗಿವೆ.
ಮತ್ತೆ ಆ ಮಣ್ಣಲ್ಲಿ ಜೊತೆಗೂಡಿ ಆಡೋಣವೆಂದರೆ,
ಸಮಯವೇ ಇಲ್ಲ, ಬದುಕು ಗಡಿಬಿಡಿಯಲಿ ಸೆರೆಯಾಗಿದೆ.

 

ಧೂಳು, ಕೆಮ್ಮು, ಕೋಪ-ತಾಪ,  ಹುರುಪಿನ ಮಾತು,
ಗುನುಗಿದಂತಿದೆ, ಹೃದಯದೊಳಗೆ ಪ್ರತಿಧ್ವನಿಸುತ್ತಿದೆ.
ಜೀವನದ ಹಾದಿಯಲ್ಲಿ ಸೋತು ನಿಂತಾಗ,
ಆ ಮಾತು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.

 

ಶಾಲೆಯ ಕಿಟಕಿಯಿಂದ ಫಲಿತಾಂಶ ನೋಡಿದ ಕ್ಷಣ,
‘ಪಾಸಾದೆ! ಪಾಸಾದೆ!’ ಎಂದು ಕೂಗಿದ ಆ ಕ್ಷಣ  ನೆನಪಿದೆಯಾ?
ಡಿಸೆಂಬರ್ ಚಳಿಯಲ್ಲಿ ಮಾಳಿಗೆಯ ಮೇಲೆ ತೂಕಡಿಸಿ ಓದಿದ ರಾತ್ರಿ,
ಮಾರನೆಯ ದಿನ,
 ಜ್ಞಾಪಕ ತಪ್ಪಿ ತೊಳಲಾಟದ ಆ ಕ್ಷಣಗಳು!

 

ಇಂದಿಗೂ ಆ ದಿನಗಳನ್ನು ನೆನೆದರೆ ಕಂಗಳು ತೇವವಾಗುತ್ತವೆ,
ಮತ್ತೆ ಬಾರದು ಆ ಬಂಗಾರದ ದಿನಗಳು, ಹೌದು?
ಆಕಸ್ಮಿಕವಾಗಿ ಜೀವನದ ಪಯಣದಲ್ಲಿ ಜೊತೆಗೂಡಿ ನಲಿದೆವು,
ಯಾವ ನಿಲ್ದಾಣದಲ್ಲಿ ಹತ್ತಿದ್ದೆವೋ, ಹಾಗೆ ನಮ್ಮ ಪಯಣ ನಮ್ಮದೇ.

 

ನವ ಸಂವತ್ಸರಗಳು ಕಣ್ಣ ಮುಂದೆಯೇ ಹಾದುಹೋಗಿವೆ,
ಆ ದಿನಗಳು ಮತ್ತೆ ಎಂದೂ ಬಾರವು.
ಅನುಭವಗಳೆಲ್ಲಾ ನಮ್ಮ ಇಂದಿನ ಚೈತನ್ಯವಾಗಿದೆ,
ಮತ್ತೆ ಬರಲಿ ಆ ಬಂಗಾರದ ಆ ದಿನಗಳು.

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...