Friday, September 5, 2025

ಭರವಸೆ

ಸೋಲು ಬಂದಿದೆ ಬಾಗಿಲು ತಟ್ಟುತ್ತಾ,

ಕದವ ಬಡಿಯುತ್ತಿದೆ, ಚೈತನ್ಯವ ಅಡಗಿಸಿ!,

ಎಣಿಸಿರಲಿಲ್ಲ ಮನೆಯ ಬಾಗಿಲಿಗೇ ಬರುವುದೆಂದು.

ಕರಿಛಾಯೆ ಹೊರಗಡೆ, ಕದವ ತೆರೆಯದೇ ವಿಧಿಯಿಲ್ಲವೆನಗೆ,

ಭಯ ಆವರಿಸಿದೆ ಮೈ ಮನಗಳಲೆಲ್ಲಾ, ಹೀರುತಿದೆ ಅಧಮ್ಯ ಚೇತನವ,

ಇಂದು ನನ್ನದೆಂದು ಕೊಂಡಿದೆಲ್ಲವೂ ಮಂಜಿನಂತೆ ಕರಗಿಹೋಗುತ್ತಿದೆ.

ನನ್ನವರೆಂದು ಕೊಂಡವರೆಲ್ಲಾ ಮುಗಿಯಿತು ಬರುವೆವೆನ್ನುತ್ತಿಹರು.

ನಡೆದ ದಾರಿ ಕೊನೆಗೊಂಡಿದೆ, ಮುಂದೆ ದಾರಿ  ಕಾಣದೆ.

ಮನದಲ್ಲಿ ಗುರಿಯಿಲ್ಲ. ಕೈ ಹಿಡಿದು ನಡೆಸುವ ಗುರುವೂ ಇಲ್ಲ.

ದಾರಿಕಾಣದಾಗಿದೆ, ಮನವು ಗೊಂದಲದಲ್ಲಿದೆ.

ಹೊಸ ಬೆಳಕಿಗೆ ಹಾತೊರೆಯುತ್ತಾ ಭರವಸೆಯ ಬೆನ್ನುಹತ್ತಿದೆ.

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...