Thursday, September 25, 2025

ಸ್ನೇಹ - ಅಮರ

 

ಬಾಲ್ಯದ ಕನಸುಗಳು ಗುರುಕುಲದಲ್ಲಿ,

ಕೃಷ್ಣ, ಸುದಾಮ ಸಂತಸದ ಹೃದಯಗಳು.

ಒಬ್ಬ ರಾಜಕುಮಾರ, ಮತ್ತೊಬ್ಬ ಬಡವ,

ಕೈಕೈ ಹಿಡಿದು ನಕ್ಷತ್ರಗಳ ಕೆಳಗೆ,

ಸಮಾನತೆಯ ನೆರಳಲ್ಲಿ ಸಂಭ್ರಮಿಸಿದರು.

 

ವರ್ಷಗಳು ಕಳೆದವು, ಅದೃಷ್ಟ ಬದಲಾಯಿತು,

ಆದರೆ ಅವರ ಸ್ನೇಹ ಶಾಶ್ವತವಾಯಿತು.

ಪ್ರೀತಿ, ವಾತ್ಸಲ್ಯವು ಕಾಲದ ಮಿತಿ ಮೀರಿತು,

ಗೆಳೆತನ ಹೃದಯಗಳಲ್ಲಿ ನೆಲೆಸಿದವು.

 

ಸುದಾಮ, ವಿನಮ್ರ, ಪರಿಶುದ್ಧ ಹೃದಯ,

ಹಸಿವಿನಿಂದ ಕೃಷ್ಣನ ಮನೆ ಬಾಗಿಲು ತಟ್ಟಿದ.

ಕೃಷ್ಣ, ಪ್ರೀತಿಯಿಂದ ಅಪ್ಪಿಕೊಂಡ,

ಸ್ನೇಹದಲ್ಲಿ ಭೇದವಿಲ್ಲ ಜಗಕೆ ತೋರಿಸಿದ.

 

ಒಂದು ಹಿಡಿ ಅಕ್ಕಿ – ಸರಳ ಉಡುಗೊರೆ,

ಕೃಷ್ಣನಿಗೆ ಅತ್ಯಂತ ಅಮೂಲ್ಯವಾದದು.

ಅವರ ಉತ್ಸಾಹ, ಪ್ರೀತಿ, ಭಾವನೆಗಳು,

ಸ್ನೇಹದ ಅಮರತೆಯನ್ನು ಸಾರಿದವು.

 

ಕೃಷ್ಣ,ಸುದಾಮ – ಎರಡು ಹೃದಯಗಳು,

ಸ್ನೇಹದ ನಂಟಿನಲ್ಲಿ ಹೆಣೆದ ಕಥೆ.

ಇದು ನಮ್ಮೆಲ್ಲರಿಗೂ ಪಾಠ –

ಸತ್ಯ ಸ್ನೇಹವು ಶುದ್ಧ, ಶಾಶ್ವತ, ಅಮರ.

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...