ಒಮ್ಮೆ ಹೀಗೆ ಕುಗ್ಗಿ ಹೋಗಿದ್ದೆ,
ಈ ಜೀವನವೇ ಬೇಡವೆನಿಸಿತ್ತು.
ಋಣಾತ್ಮಕತೆಯ ಪಾತಾಳದಲ್ಲಿ ಸೆರೆಯಾಗಿದ್ದೆ,
ಸಾಕು ಸಾಕು ಎಂದು ಜೀವನವನ್ನೇ ತಿರಸ್ಕರಿಸಿದ್ದೆ.
ಬೆಳಕು ಭಯವೆನಿಸತೊಡಗಿತ್ತು,
ಕತ್ತಲು ಆಪ್ಯಾಯಮಾನವಾಗಿತ್ತು.
ಶಿಸ್ತು, ಸಂಯಮ—ನಿದ್ದೆಗೆ ಜಾರಿದವು,
ನಿದ್ದೆ ಹವ್ಯಾಸ, ವ್ಯಾಯಾಮ ಬೇಡವಾದವು.
ದೇಹ ರೋಗಗಳ ಗೂಡಾಯಿತು,
ಸಾವು ಇಷ್ಟವಾಗತೊಡಗಿತ್ತು.
ಜೀವನವೇ ಬೇಸರವೆನಿಸಿತು,
ಹೃದಯದಲ್ಲಿ ಶೂನ್ಯತೆ ತಾಂಡವವಾಡಿತು.
ಆ ಕ್ಷಣಿಕ ತೊಂದರೆ—ಎಲ್ಲಾ ಮಾಯವಾಯಿತು,
ಅದು ಗೆಳೆಯನ ಸ್ಪರ್ಶದಿಂದ.
ಅವನ ಮಾತು, ಅವನ ಹಾಸ್ಯ, ಅವನ ಸನಿಹತೆ —
ಜೀವನದಲ್ಲಿ ಚೈತನ್ಯ ತುಂಬಿತು.
ಗೆಳೆತನವೆಂದರೆ ಜೀವನ ಪ್ರೀತಿ,
ಅದು ಬೆಳಕು, ಅದು ಶಕ್ತಿ, ಅದು ನವಚೇತನ.
ಅಂಧಕಾರದೊಳಗಿನ ಬೆಳಕು,
ಮರಳಿತು ನಗು, ಮರಳಿದೆ ನಾನು.
No comments:
Post a Comment