ಇಂದೇಕೆ ಹೃದಯ ವೀಣೆ ಮಿಡಿಯುತಿದೆ
ಯಾವ ರಾಗಕೆ ಮನಸೋತು ನರಳುತಿದೆ
ಮನಕರಗಿ,ಹೃದಯ ಮರುಗಿ ತೊಳಲುತಿದೆ
ಭಾವಗಳು ಮನದೊಳಗೆ ತಿರುತಿರುಗಿ ಮೇಲೇರುತಿದೆ
ನಿನ್ನ ಕಂಡಾಗಲೇ ಮನದಲ್ಲೇನೋ ಹೊಸತನ
ಆ ಮಾತು, ಆ ನೋಟ ಕಾಣಬೇಕೆಂಬ ಕಾತರ
ನಿಂತಲ್ಲೇ ನಿಂತು ಕಾಯುವುದು ನಿನಗಾಗಿಯೇ
ಯಾರೇ ಕಂಡರೂ ನೀನ್ನೆಂದೇ ತಿಳಿಯುವ ಭ್ರಮೆ
ಬೇಸರವಿಲ್ಲ ನೀನು ಬರಲಿಲ್ಲವೆಂದು
ಪ್ರತಿದಿನ ಕಾಯುವೆ ನಿನಗಾಗಿ ಬೇಕೆಂದೇ
ನೀನು ಬರುವೆಯೆಂಬ ನೆವಸಾಕು ನನಗೆ ಜೀವಿಸಲು
ವಿರಹ ನೂರು ಬರಲಿ, ಕಾಯುವ ಭಾಗ್ಯ ನನಗೇ ಸಿಗಲಿ
ಪ್ರತಿಯೊಂದು ಕ್ಷಣವೂ ನಿನ್ನ ಜೊತೆಯಲ್ಲಿರುವೆ
ಕತ್ತಲಲ್ಲೂ, ಬೆಳಕಲ್ಲೂ,ದುಃಖ,ನೆತ್ತರಲ್ಲೂ ನೀನೆ ಕಾಣುವೆ
ನೀನಿಲ್ಲದ ಜಾಗವಾವುದೆಂದು ಹುಡುಕಬೇಕಿದೆ
ಎಲ್ಲೋ ಇರುವ ನಿನ್ನಲ್ಲೂ ನಾನೇ ಇರುವೆ
Saturday, October 23, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment