ನಿದ್ದೆ ಆವರಿಸಿದೆ
ನಿದ್ರಾದೇವತೆ ಅವನ ಬಿಟ್ಟು ಹೋಗಳು
ಮುಗ್ದತೆಯೆ ಮೈ ತುಂಬಾ ಹೊಕ್ಕಿದೆ
ಕಣ್ಣು ಬಿಟ್ಟರೆ ನಗುವೇ ಆವರಿಸುತ್ತೆ
ಹಸಿವಾದರೇ ಅಳುವಿನ ಗಣಗಳು ರುದ್ರನರ್ತನ
ಹೊಟ್ಟೆ ತುಂಬಿದರೆ ಯಾವ ಚಿಂತೆಯೂ ಇಲ್ಲ
ಮಾತಿಲ್ಲ ಆದರೇ ಮೌನದಲೇ ಶಬ್ದ ತರಂಗಗಳು
ಸಂಗೀತದ ಅಲೆಗಳು ತೇಲುತ್ತಿವೆ
ಸಾವಿರ ಕಣ್ಣುಗಳ ಗಮನ ಅವನ ಮೇಲೆ
ನಿದ್ದೆಯಿಂದ ಏಳಬಾರದೇ
ಎಲ್ಲ ಮನಗಳ ಆಶಯ
ಅಳುವು ಶುರುವಾದರೆ ಎಲ್ಲರೂ ಮಾಯ
ನಗುವು ತೇಲಿ ಬಂದರೆ ಎಲ್ಲರೂ ಹಾರಿಬರುವರು
ಎಲ್ಲರ ಬಾಯಲ್ಲೂ ಅವನೇ
ಎಲ್ಲರಲ್ಲೂ ಯೋಚನೆ ಅವನ ಹೆಸರೇನೆಂದು?
ಅ-ಅಸಾಮಾನ್ಯ
ನೀ-ನಿಧಾನವೇ ಪ್ರಧಾನವೆನ್ನುವವ
ಶ್-ಶಕ್ತ- ಎಲ್ಲವನ್ನೂ ಸಾಧಿಸುವ ಶಕ್ತಿಯುಳ್ಳವ
ಮುದ್ದು ಮುಖದವ
ನಮ್ಮ ಸುಖವನ್ನು ತನ್ನ ನಗುವಿನಿಂದಲೇ ತರುವವ
ನಮ್ಮ ನಿಮ್ಮವ ಅನೀಶ್.
Saturday, October 23, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment