ವರುಷ ಕಳೆದಿದೆ ಅವಳು ಮನೆಯ ತೊರೆದು
ಮನದಲ್ಲಿ ಮಾಸದ ನೆನಪು ಗಟ್ಟಿಯಾಗಿ ಇಳಿದಿದೆ
ಮತ್ತೆ-ಮತ್ತೆ ಮನಸು ಅವಳ ಹೆಸರ ಕರೆದು
ನೆನಪು ಮಾಡಿಕೊಂಡೆನೆಂದು ಸಂತೋಷಪಟ್ಟಿದೆ
ಒಂದೇ ತಿಂಗಳು ಆಷಾಡವೆನ್ನುವರು ತಿಳಿದವರು
ವರ್ಷವೆಲ್ಲಾ ಆಷಾಡವೇ ಆಗಿದೆ ನನಗೆ
ಪ್ರೀತಿಯ ತೀವ್ರತೆ ವಿರಹವೋ
ವಿರಹದ ತೀವ್ರತೆ ಪ್ರೀತಿಯೋ ಒಂದೂ ತಿಳಿಯದಾಗಿದೆ
ದಿವಸಕ್ಕೆ ಒಂದು ಹಗಲು ಒಂದು ರಾತ್ರಿಯಂತೆ
ವರ್ಷಕ್ಕೋಂದು ರಾತ್ರಿಯಾದಂತಿದೆ ನನಗೆ
ಮುಂಗಾರಿಗೆ ಬಾಯಿತೆರೆದು ಕಾಯುತಿಹಳು ಇಳೆ
ಮನಸು ಮಿಂದಿದೆ,ನೊಂದಿದೆ-ಕಾರಣ ನಿನ್ನ ನೆನೆಪ ಮಳೆ
ನಾಳೆ ಬರುವಿಯೆಂದು ಇಂದೇ ಮುನ್ನುಡಿ ಬರೆದೆ
ಬರಲೋ? ಬೇಡವೋ? ಎಂದು ಪೀಠಿಕೆ ನೀನೇ ತೆರೆದೆ
ಮುಗಿಯದ ದ್ವಂದ್ವ ನಾಳೆಗೆ ತೆರೆ ಎಳೆದಿದೆ
ನಿನ್ನ ಹೆಸರ ಮನದ ಪುಟಗಳಲ್ಲಿ ಭಾರದ ಹೃದಯದಿಂದಲೇ ಬರೆದೆ
Wednesday, October 27, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment