ಮನಸೇ ಹೊರಡು ಇಲ್ಲಿಂದ
ಬಿಡು ಊಟ, ನಿದ್ದೆ ಈಗಲೇ
ಗುಂಡಿನ ಶಬ್ದ ಕೇಳಿಸುತ್ತಿರುವುದೇ
ಗಡಿಯಾಚೆಯಿಂದ ಶತ್ರುಗಳ ಅಟ್ಟಹಾಸ
ಹೊರಡು ಅಲ್ಲಿ ಗೆಳೆಯನೋರ್ವ
ನಿನಗಾಗಿ ಕಾಯುತಿಹನು ಪ್ರಾಣವ ಕೈಯಲ್ಲಿ ಹಿಡಿದು
ಅವನ ನಂಬಿಕೆಯನ್ನು ಸುಳ್ಳಾಗಿಸಬೇಡ
ಅವನು ಕಣ್ಣುಮುಚ್ಚುವ ಮುನ್ನ ಸಾಗು ಅವನೆಡೆಗೆ
ಗುಂಡು ಎದೆಗೆ ಬಡಿದರೂ
ಎದೆಗುಂಧದೆ ಸಾಗು ಮುಂದೆ
ಹಾಂ! ಅಲ್ಲಿ ಬಿದ್ದಿರುವನು ನನ್ನ ಗೆಳೆಯ
ನರಳುತ್ತಾ ಎದೆಯ ಹಿಡಿದುಕೊಂಡು
ಒಂದು ಕೈಯಲ್ಲಿ ಭಗವದ್ಗೀತೆ
ತುಟಿಯಲ್ಲಿ ನನ್ನದೆ ಧ್ಯಾನ
ರಕ್ತತಿಲಕ ಹಣೆಯಲಿ, ಮೈಯಲ್ಲಾ ರಕ್ತ
ನಡೆದಿದೆ ಕೊನೆಯ ಪಯಣದ ಮೆರವಣಿಗೆ
ನನ್ನ ಕಂಡೊಡನೆ ಅವನಲ್ಲಿ ಚೈತನ್ಯ
ತುಟಿಯಲ್ಲಿ ನೋವಿನ ನಗು
ಕಣ್ಣಲ್ಲಿ ಆನಂದ ಭಾಷ್ಪ
ಅವನು ಹೇಳಿದ ಕೊನೆಯ ಮಾತು
ಅವನು ಹೇಳಿದ ಕೊನೆಯ ಮಾತು
"ಗೆಳೆಯ ನನಗೆ ಗೊತ್ತಿತ್ತು ನೀನು
ನನಗಾಗಿ ಬಂದೇ ಬರುವೆಯೆಂದು"
ಅವನ ನಂಬಿಕೆಯನ್ನು ನಾನು ಉಳಿಸಿದ್ದೆ
ಅವನ ನಂಬಿಕೆ ನಾನು ಉಳಿಸಿದ್ದೆ
ಅವನನ್ನು ನಾನು ಕಳೆದುಕೊಂಡಿದ್ದೆ
ನನ್ನ ಮೇಲಿನ ಪ್ರೀತಿ, ಅವನ ಮೇಲಿನ ಪ್ರೀತಿ
ನಂಬಿಕೆಯೊಂದು ಗಟ್ಟಿಗೊಳಿಸಿತ್ತು
Wednesday, October 27, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment