ನಾನು ತುಂಬ ಚಿಕ್ಕವ
ಅಮ್ಮ ನನ್ನನ್ನು ಎಲ್ಲಿಂದಲೋ
ತಂದು ಮನೆಯ ಅಂಗಳದಲಿ
ನೆಟ್ಟು ಹೊಸ ಜೀವ ನೀಡಿದಳು||
ಪ್ರೀತಿ ವಾತ್ಸಲ್ಯದ ನೀರೆರೆದು
ತನ್ನ ಅಮೃತಹಸ್ತದಿಂದ
ಮೈದಡವಿ ಎತ್ತರೆತ್ತರಕೆ
ಬೆಳೆ ಮಗು ಎಂದು ಧೈರ್ಯ ತುಂಬಿದಳು||
ನಾ ಮೊದಲು ಹೂ ಬಿಟ್ಟಾಗ
ಅಮ್ಮ ಪಟ್ಟ ಸಂತೋಷ ಅಷ್ಟಿಷ್ಟಲ್ಲ
ನೆರೆಹೊರೆಯವರಿಗೆಲ್ಲಾ ನನ್ನ
ಸೌಂದರ್ಯವ ಹಾಡಿ ಹೊಗಳಿದಳು||
ನಾ ಬಿಟ್ಟ ಹಣ್ಣುಗಳನ್ನು
ಎಲ್ಲರಿಗೂ ಕೊಟ್ಟು ಆನಂದಿಸಿದಳು
ಪಕ್ಕದ ಮನೆಯ-ದಾರಿ ಹೋಕರು
ಕಲ್ಲೆಸೆದಾಗ ನೋವು ಅನುಭವಿಸಿದಳು||
ಅಮ್ಮ ಈಗಿಲ್ಲ
ನಾನು ತುಂಬಾ ಎತ್ತರಕ್ಕೆ ಬೆಳೆದಿದ್ದೇನೆ
ಪರಕೀಯನಾಗಿ ಅನಾಥನಾಗಿದ್ದೇನೆ
ಅಮ್ಮನ ಪ್ರೀತಿ-ವಾತ್ಸಲ್ಯವಿಲ್ಲದೆ ಸೊರಗಿದ್ದೇನೆ||
ಅಮ್ಮನ ಮನೆ ಮುರಿದಿದೆ
ಸರ್ಕಾರದವರ ಪಾಲಾಗಿರುವೆ
ಮನೆಯ ಜಾಗದಲ್ಲಿ ವಾಹನ ನಿಲ್ಡಾಣ
ನಿರ್ಮಾಣವಾಗುವುದೆಂದು ಸುದ್ದಿ||
ಸುದ್ದಿ ನಿಜವಾಯಿತು
ಅಮ್ಮನ ಮನೆ ಮಣ್ಣು ಸೇರಿತು
ಹತ್ತು ಸಾವಿರಕೆ ನಾನು ಮಾರಟವಾದೆ
ಯಾರ ಮನೆಯ ಮೇಜು, ಬಾಗಿಲು ಕುರ್ಚಿ-
ಯಾಗುವೆನೋ ನಾನು?......||
ಅಮ್ಮಾ.........ಅಮ್ಮಾ........
ಗರಗಸದಿಂದ ಕೊಯ್ದರು
ಮಚ್ಚಿನಿಂದ ರೆಂಬೆಗಳ ಕತ್ತರಿಸಿದರು
ನನ್ನ ನೋವನ್ನು ಕಂಡು
ಜನರು ಕೇಕೆ ಹಾಕುತ್ತಿರುವರು||
ಅಮ್ಮಾ ನೀನಿದ್ದರೆ ನನಗೆ
ಈ ರೀತಿ ಮಾರಣಾಂತಿಕ ನೋವಾಗುತ್ತಿತ್ತೆ...
ಅಮ್ಮಾ ನೀನಿದ್ದರೆ....
ಅಮ್ಮಾ ನೀನಿದ್ದರೆ.....||
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment