ಲೋಕಕ್ಕೆ ನೂರು ಬಾಗಿಲುಗಳು
ಅಂಧಕಾರವ ಓಡಿಸಲು\
ಸೂರ್ಯನೋಬ್ಬನೆ ಸಾಕಲ್ಲವೇ
ಲೋಕದ ಕತ್ತಲು ಓಡಿಸಲು\\
ಮನಸ್ಸಿಗೆ ಒಂದೇ ಬಾಗಿಲು
ತೆರೆಯುವುದಿಲ್ಲ ಸುಮ್ಮನೆ\
ಬಣ್ಣ ಬಣ್ಣದ ತೊಗಲು
ಬಾಯಿ ಬಿಡುವರು ಬೊಮ್ಮನೇ\\
ಮನಸ್ಸಿಗೆ ಬೇಸರ
ಬೇಕಿದೆ ಚೈತನ್ಯದ ಹೊನಲು\
ಬೇಕು ಗುರುವಿನ ಆಸರೆ
ಕಾಣಲಿಲ್ಲ ತೆರೆದ ಬಾಗಿಲು\\
ಮನಸು ಕಾದಿದೆ
ಒಲವ ಗುರುವಿನ ಹಾರೈಕೆಗೆ\
ನೂರು ಗುರುಗಳು ಲೋಕದಲ್ಲಿ
ಯಾರ ಹೃದಯದ ಬಾಗಿಲು ತೆರೆಯಲಿಲ್ಲ ನನಗಾಗಿ\\
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ...
No comments:
Post a Comment