ರಭಸದಿಂ ಧುಮಿಕ್ಕಿ
ಹರಿಯುತಿರುವ ನೀರೆ ನೀ ಯಾರು?
ಸೌಮ್ಯವನೆ ಕಳಚಿಕೊಂಡು
ಕ್ರೋಧವನೆ ಮೈತಳೆದು
ಭೋರ್ಗರೆಯುವ ನೀರೆ ನೀ ಯಾರು?\\
ಎಲ್ಲಿ ನಿನ್ನ ಹುಟ್ಟು?
ಎತ್ತ ನಿನ್ನ ಪಯಣ?
ಎಲ್ಲರ ಕೊಳೆ ತೊಳೆದು
ಮಲಿನತೆಯ ಅರಿವೇ ತೊಟ್ಟು
ಎತ್ತ ಹೊರೆಟಿರುವೆ ನೀರೆ ನೀನು?\\
ಗಿರಿ-ಕಂದರಗಳಲ್ಲಿ ಹರಿಯುವುದಿಲ್ಲ
ಸಸ್ಯ ಶಾಮಲೆಯ ಸೊಂಕಿಲ್ಲ ನಿನಗೆ
ಸುವಾಸನೆಯ ಬೀರುವುದಿಲ್ಲ
ಪೂಜನೀಯ ಗೌರವವಿಲ್ಲ ನಿನಗೆ\\
ಪಾವನೆ ಗಂಗೆ ಸೇರುವ ತವಕ
ಅದಕ್ಕೆ ಮರು ಮಾತಿಲ್ಲದ ಪಯಣ
ನಿನ್ನ ಕಣ್ಣೀರು ಒರೆಸುವವರಿಲ್ಲ
ಕಸ ಕಡ್ಡಿ ದುರ್ಗಂಧ ಹೋಗುತಿದೆ ಪ್ರಾಣ\\
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ...
No comments:
Post a Comment