ನೂರು ಕನಸುಗಳು
ಮನದ ತುಂಬೆಲ್ಲಾ ಮನೆ ಮಾಡಿದೆ\
ನೂರು ಮಾತುಗಳು
ಗುರಿಯ ಕಡೆಗೆ ಹೋಗದಂತೆ ತಡೆದಿದೆ\\
ಕಣ್ಣು ಮುಚ್ಚಿದರೆ
ಹೊಸ ನವಿರಾದ ಅಂಕಣದ ಅನಾವರಣ\
ಬಣ್ಣ ಬಣ್ಣದ ಚಿತ್ತಾರ
ಚೈತನ್ಯದ ಚಿಲುಮೆಯಾಗಿ ಆರೋಹಣ\\
ಬೆನ್ನು ತಟ್ಟಿ ಮುಂದೆ ಹೋಗೆಂದು
ತನ್ನವರು ಬೆಂಬಲಿಸಿ ಹಾರೈಸುವರು\
ಬೆನ್ನ ಹಿಂದೆ ನೂರು ಚುಚ್ಚುಮಾತು
ಗುರಿಯಿಂದ ವಿಚಲಿತನಾಗುವಂತೆ ಮಾಡುವರು\\
ಮನದಲೆಲ್ಲಾ ತೊಳಲಾಟ
ಅವರಲ್ಲೊ ನನ್ನ ಕಂಡು ವಿಕಟಹಾಸ
ಬಳಲಿ ಬೆಂಡಾಗಿ ಸೊರಗಿರುವೇನು
ಮಾತಿಗೆ ಆಹಾರವಾಗಿ ಬಲಿಯಾಗಿರುವೆನು\\
Monday, June 21, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment