Tuesday, June 22, 2010

-ಚಿಗುರು-

ಬಯಕೆ ಬಸಿದು ಹೊಸೆದ ಕನಸು ನನಸಾಗುವುದೇ?
ಇರುಳು ಕಂಡ ಕನಸಿನಂತೆ ಜಾರಿಹೊಗುವುದೇ?\\

ಕಳೆದು ಹೋದ ದಿನಗಳು
ಮತ್ತೆ ಮತ್ತೆ ಮನವ ಕೆದಕಿದೆ\
ಏಳದಂತೆ ಮನದ ತುಂಬಾ
ಮಾಸದ ಗಾಯವ ಮಾಡಿಹೋಗಿದೆ\\

ಕಳೆದು ಹೋದುದಕೆ ಚಿಂತೆಯಿಲ್ಲ
ಮುಂದಿನ ದಾರಿ ಸ್ಪಷ್ಟವಾಗಿದೆ\
ಜೊತೆಗೆ ನಿಂತು ಕೈಹಿಡಿದು
ಮುಂದೆ ನಡೆಸುವೆ ಎಂಬ ಆಸೆ ಮಾತ್ರ ಚಿಗುರಿದೆ\\

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...