Tuesday, June 22, 2010

-ಚಿಗುರು-

ಬಯಕೆ ಬಸಿದು ಹೊಸೆದ ಕನಸು ನನಸಾಗುವುದೇ?
ಇರುಳು ಕಂಡ ಕನಸಿನಂತೆ ಜಾರಿಹೊಗುವುದೇ?\\

ಕಳೆದು ಹೋದ ದಿನಗಳು
ಮತ್ತೆ ಮತ್ತೆ ಮನವ ಕೆದಕಿದೆ\
ಏಳದಂತೆ ಮನದ ತುಂಬಾ
ಮಾಸದ ಗಾಯವ ಮಾಡಿಹೋಗಿದೆ\\

ಕಳೆದು ಹೋದುದಕೆ ಚಿಂತೆಯಿಲ್ಲ
ಮುಂದಿನ ದಾರಿ ಸ್ಪಷ್ಟವಾಗಿದೆ\
ಜೊತೆಗೆ ನಿಂತು ಕೈಹಿಡಿದು
ಮುಂದೆ ನಡೆಸುವೆ ಎಂಬ ಆಸೆ ಮಾತ್ರ ಚಿಗುರಿದೆ\\

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...