ಭಾವನೆಗಳು ಎದೆಯೊಳಗೆ ಬೀಸಿದರೆ
ನೋವು ಕಣ್ಣೀರಾಗಿ ಹರಿಯುವುದು\
ಮೌನದ ತಂಗಾಳಿ ಮನದೊಳಗೆ ಸಿಲುಕಿರಲು
ಹೃದಯದ ಮಾತು ಕವಿತೆಯಾಗಿ ಅರಳುವುದು\\
ಒಂದೊಂದು ಕ್ಷಣವೂ ಹೋರಾಟ ನಮಗಿಲ್ಲಿ
ಯೋಚನೆಗಳ ಹುಟ್ಟು-ಸಾವುಗಳ ಪರದಾಟ ಮನದಲ್ಲಿ\
ಯೋಚನೆಗಳು ಕಾರ್ಯಾರಂಭ ಮಾಡುವ ಮೊದಲೇ ಮರಣ
ಮನದಲ್ಲಿ ನೂರು ಕದನ; ಮನದಿಂದ ಶಾಂತಿಯ ಹರಣ\\
ಎಲ್ಲಿ ಅಲೆಯಲಿ ಹೇಳು! ನಾನಿಲ್ಲಿ ಏಕಾಂಗಿ
ಅತ್ತರೂ ಕಣ್ಣೀರೋರೆಸುವವರು ಇಲ್ಲಿಲ್ಲ ಪರಿತ್ಯಾಗಿ \
ಸಂತೋಷ ಹಂಚೋಣವೆಂದರೆ ಎಲ್ಲರಿಗೂ ಆತಂಕ
ಏಕೆ ಬದಲಾದ? ಏನೋ ನಡೆದಿದೆ ಮಸಲತ್ತು ಬಿಂಕ\\
ನನ್ನೊಳಗೆ ನೂರು ಯೋಧರ ಹೋರಾಟ ನಡೆದಿದೆ
ಕಣ್ಣು ಮುಚ್ಚಿ ಕುಳಿತಿರಲು ಮನದಲ್ಲಿ ಗಾಯದ ನೋವು ಹೆಚ್ಚಿದೆ\\
ನಿನ್ನ ಸಮಸ್ಯೆಗೆ ನೀನೇ ಉತ್ತರವಾಗು
ಛಲದಿಂದ ಎದುರಿಸಿ ಎಲ್ಲರಿಗಿಂತ ಎತ್ತರವಾಗು\\
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ...
No comments:
Post a Comment