ಭಾವನೆಗಳು ಎದೆಯೊಳಗೆ ಬೀಸಿದರೆ
ನೋವು ಕಣ್ಣೀರಾಗಿ ಹರಿಯುವುದು\
ಮೌನದ ತಂಗಾಳಿ ಮನದೊಳಗೆ ಸಿಲುಕಿರಲು
ಹೃದಯದ ಮಾತು ಕವಿತೆಯಾಗಿ ಅರಳುವುದು\\
ಒಂದೊಂದು ಕ್ಷಣವೂ ಹೋರಾಟ ನಮಗಿಲ್ಲಿ
ಯೋಚನೆಗಳ ಹುಟ್ಟು-ಸಾವುಗಳ ಪರದಾಟ ಮನದಲ್ಲಿ\
ಯೋಚನೆಗಳು ಕಾರ್ಯಾರಂಭ ಮಾಡುವ ಮೊದಲೇ ಮರಣ
ಮನದಲ್ಲಿ ನೂರು ಕದನ; ಮನದಿಂದ ಶಾಂತಿಯ ಹರಣ\\
ಎಲ್ಲಿ ಅಲೆಯಲಿ ಹೇಳು! ನಾನಿಲ್ಲಿ ಏಕಾಂಗಿ
ಅತ್ತರೂ ಕಣ್ಣೀರೋರೆಸುವವರು ಇಲ್ಲಿಲ್ಲ ಪರಿತ್ಯಾಗಿ \
ಸಂತೋಷ ಹಂಚೋಣವೆಂದರೆ ಎಲ್ಲರಿಗೂ ಆತಂಕ
ಏಕೆ ಬದಲಾದ? ಏನೋ ನಡೆದಿದೆ ಮಸಲತ್ತು ಬಿಂಕ\\
ನನ್ನೊಳಗೆ ನೂರು ಯೋಧರ ಹೋರಾಟ ನಡೆದಿದೆ
ಕಣ್ಣು ಮುಚ್ಚಿ ಕುಳಿತಿರಲು ಮನದಲ್ಲಿ ಗಾಯದ ನೋವು ಹೆಚ್ಚಿದೆ\\
ನಿನ್ನ ಸಮಸ್ಯೆಗೆ ನೀನೇ ಉತ್ತರವಾಗು
ಛಲದಿಂದ ಎದುರಿಸಿ ಎಲ್ಲರಿಗಿಂತ ಎತ್ತರವಾಗು\\
Saturday, June 26, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment