Monday, June 21, 2010

-ಮನಸಿನ ತಲ್ಲಣ -

ಸುಮ್ಮನೆ ಕುಳಿತಿಹೆ
ಏನು ಮಾಡಬೇಕೆಂದು ತೋಚದೆ\
ಸುಮ್ಮನೆ ಅಲೆಯುತಿಹೆ
ಗುರಿಯಾವುದೆಂದು ತಿಳಿಯದೆ\\

ಇದು ಮೊದಲಲ್ಲ
ಎಷ್ಟೆಂದು ಬೆರಳ ತುದಿಯಲ್ಲಿದೆ\
ಇದೆ ಕೊನೆಯಲ್ಲ
ನಾಳೆಯು ಬರುವುದಿದೆ\\

ತೆರೆಯ ಮರೆಯಲ್ಲಿ
ಚಿತ್ತಾರದ ಪ್ರಶ್ನೆ ನೂರಿದೆ\
ಮುಗಿಯುವುದೇ ಇಂದಿಲ್ಲಿ
ಎಂಬ ಪ್ರಶ್ನೆ ಮನದಲ್ಲಿ ಕಾಡಿದೆ\\

ಫಲಿತಾಂಶ ಶೂನ್ಯ
ಗೊತ್ತಿರುವ ಉತ್ತರವದು\
ಅಗುವೆನೇ ಮಾನ್ಯ
ಹಗಲುಗನಸಿನ ಆಶಾವಾದವದು\\

No comments:

Post a Comment

ಅಣುವಿನಿಂದ ಅನಂತದವರೆಗೆ

ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...