ಉರಿವ ಬಿಸಿಲಿನಲ್ಲೂ
ಅವಕಾಶದ ಹೆಜ್ಜೆಯಿದೆ\\
ಕಗ್ಗತಲಿನ ಇರುಳಿಗೂ
ಬೆಳಕಿನ ಕಾತರತೆಯಿದೆ\\
ಬರಡಾದ ಈ ಹೃದಯಕ್ಕೆ
ನಿನ್ನ ಪ್ರೀತಿಯ ಬಯಕೆಯಿದೆ\\
ತಿರುಗುವ ಭೂಮಿಗೂ
ನಿರಂತರ ಬದಲಾವಣೆಯಿದೆ\\
ನಾಳೆ ಬರುವುದು ಖಚಿತ
ಇಂದು ಒಡೆದ ಕನ್ನಡಿಯಾಗಿದೆ ಬದುಕು\\
ಇಂದೇ ಅನುಭವಿಸುವ ಯೋಚನೆಯಿಲ್ಲ
ನಾಳೆಗೆ ಮಾತ್ರ ಯಾಚನೆ ನೂರಾರು ಏಕೋ?\\
Tuesday, June 22, 2010
Subscribe to:
Post Comments (Atom)
ಅಣುವಿನಿಂದ ಅನಂತದವರೆಗೆ
ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment