ನಾಲ್ಕು ದಿನದ ಸಂತೆ
ಮುಗಿಯುವ ದಿನ ಬರುವುದಂತೆ
ಬೆದರುವವರು, ಭೋಗಿಸುವವರು
ಹಿಂಸಿಸುವವರು ಶೋಷಿತರ ದನಿ ಕಳೆಯುತಿರುವಂತೆ\\
ವೇಧ ಭಾರತ ಮುಸುಕಾಗಿರಲು
ಸ್ವಾತಂತ್ರ ಜ್ಯೋತಿಗೆ ಎರಕಹೊಯ್ಯುತಿರಲು
ದಾಸ್ಯ ಕಳಚಿ, ನೋವು ಮರೆಯುತಿರಲು
ಒಳಮನಸುಗಳ ದ್ವೇಷ ಜ್ವಾಲೆ ಹೊಗೆಯಾಡುತಿರಲು\\
ಸಾಮ್ರಾಜ್ಯಶಾಹಿ ,ಅಧಿಕಾರಶಾಹಿ
ಪುರೋಹಿತಶಾಹಿ, ಮೌಲ್ವಿ-ಪಾದ್ರಿ ಶಾಹಿ
ಗಹಗಹಿಸಿ ನಕ್ಕು ಮೌನಕ್ಕೆ ಶರಣಾಗುತಿರಲು
ದಲಿತಶಾಹಿ, ರಾಜಕೀಯಶಾಹಿ ಮೊಗೆಮೊಗೆಯುತಿರಲಿ\\
ಸಾಮಾನ್ಯ ಬಡ ಉಳ್ಳವರು
ಸಮಾನತೆಗಾಗಿ ಬಾಯಿ ಬಡಿದುಕೊಳ್ಳುತ್ತಿರಲು
ಬಡತನ. ಮಾನವೀಯತೆ ಮೌನವಾಗಿ
ಮುಖಕ್ಕೆ ಫರದೆ ಹಾಕಿಕೊಂಡು ಎದುರಿಸಲಾಗದೆ ಕಾಳುಕೀಳುತ್ತಿರಲು\\
ಎದುರಿಸಲಾಗದವರ ಬಾಯಲ್ಲಿ ಬರೀ ವೇದಾಂತ
ನೋವುನ್ದವರ ಬಾಳೆಲ್ಲಾ ಬರೀ ಶೋಕಾಂತ
ಹಣದ ಥೈಲಿ ಕೈಯವರ ಬದುಕು ಸುಖಾಂತ
ಹೋರಾಡುವವರು,ಶೋಕಿಸುವವರು, ನೋವನ್ನೇ ನುಂಗುವವರು ಸಾಗುತಲಿರಲು\\
ಸಮಾನತೆಯೆನ್ಬುದು ದೂರದ ಬೆಟ್ಟ
ಅಧ್ವೈತವೆನ್ಬುದು ಮರೀಚಿಕೆ
ಸುಖವೆಂಬುದು ಭ್ರಮೆ
ಬದುಕೆಮ್ಬುದೆ ಮಾಯೆ ನಿಜವಾಗುತಿರಲು\\
ನಾಲ್ಕು ದಿನಕ್ಕೆ ಇದ್ದು ಹೋಗಲು ಬಂದವರು
ಇಲ್ಲ ಸಲ್ಲದ ಬಯಕೆಗಳಿಗೆ ಬಲಿಬಿದ್ದು
ಶಾಂತಿ ಸಾಗರದಲ್ಲಿ ಸ್ವಾರ್ಥದ
,ದ್ವೇಷದ ಮೆಲೋಗರವ ಬೆರೆಸುತಿರಲು\\
ಕಣ್ಣು ಕಾನದವರಂತೆ ನಿಂತಿರುವೆಯೇಕೆ?
ಮುಖ ಮಂದಹಾಸದಿ ತೇಲುತಿದೆ
ನಾಲ್ಕು ದಿನದ ಕೊನೆಗಳಿಗೆಯಲ್ಲಿ
ಹಿಂದೆ ನೋದುತಿರಲು ಬಯಕೆ,ಸ್ವಾರ್ಥ ಗಹಗಹಿಸಿ ನಗುತ್ತಿದೆ\\
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ...
No comments:
Post a Comment