Wednesday, December 31, 2025

ಶಕ್ತಿಯ ಹಾದಿ

ನೋವು ಬಂದಾಗ ಹೃದಯ ನಲುಗದಿರಲಿ,

ನೋವ ಎದುರಿಸುವ ತಿಕ್ಕಾಟದಿ ಬೆಳಕು ಕಾಣಲಿ.

ಹರಿವ ಕಣ್ಣೀರ ಹನಿಯಲಿ ಸುಖದ ಬೀಜ ಬಿತ್ತೋಣ,

ಶಿಸ್ತಿನ ನೋವ ಹಾದಿಯ ಬಳಸಿ ಜೀವನ ಬೆಳೆಯೋಣ.

 

ನೋವು  ಬರಲಿ ಎದುರಿಸೋಣ ಹಠ, ಧೈರ್ಯದಿ,

ನೋವ ಮರೆಮಾಡುವುದು ಬೇಡ , ಬರಲಿ ಬಿಡಿ.

ಇರುವ ನೋವು ಮನದ ಶಾಂತಿಯ ಕದಡುವುದು,

ಅನುಭವಿಸಿ, ಎದುರಿಸಿ ಹೃದಯದಿ ಬಲ ನೀಡುವುದು.

 

ಬೆಳಗಿನ ದಿನಚರಿ ಹವ್ಯಾಸ, ಅಭ್ಯಾಸ ಶಕ್ತಿ ತುಂಬುವುದು,

ಸಂಜೆಯ ಸೂರ್ಯಾಸ್ತ ಮನದಲಿ ಶಾಂತಿ ತುಂಬುವುದು,

ಸಣ್ಣ, ಸಣ್ಣ ಹೆಜ್ಜೆ ಇಡು, ದೊಡ್ಡ ಬದಲಾವಣೆಗೆ ಸಜ್ಜಾಗು,

ನಿರಂತರತೆಯ ಕಾಯ್ದುಕೋ, ಹೊಸ ಗುರಿಯೆಡೆ ಪಕ್ಕಾಗು.

 

ನೋವ ಅನುಭವಿಸಿ ದಾಟು, ನಗು ಅರಳುವುದು,

ಪಕ್ವವಾಗಿ ಹೃದಯದಿ ಹೊಸ ಕನಸು ಮೂಡುವುದು.

ತಾಳ್ಮೆ, ಶಿಸ್ತು, ಧೈರ್ಯ, ನಿರಂತರತೆಗೆ ತಲೆ ಬಾಗು,

ಅಭ್ಯಾಸ, ಹವ್ಯಾಸದಿ ಹೃದಯ ತೆರೆದು ಗೆಲುವಾಗು.

ಶಿಸ್ತಿನ ಪಿಸುಮಾತು

ಬೆಳಗಿನ ಬೆಳಕು ಮನದ ಬಾಗಿಲು ತಟ್ಟಿದಾಗ,

ಹೃದಯದೊಳಗೆ ಶಾಂತಿ ಕಿರಣ ಹರಿದಾಗ,

ಸಣ್ಣ ಸಣ್ಣ ಹೆಜ್ಜೆಗಳು ದಿನವನ್ನು ಕಟ್ಟುವುದು,

ಶಿಸ್ತಿನ ಹೂವು ಹೃದಯದಲ್ಲಿ ಅರಳುವುದು.

 

ನಿರಂತರತೆಯ ನಾದವು ಜೀವನದಲ್ಲಿ ಹೊಮ್ಮುವುದು,

ಸರಳ ದಿನಚರಿ ನೀಡುವುದು ಶಾಂತಿ, ಸಮಾಧಾನ,

ಪ್ರತಿ ಕ್ಷಣವೂ ಮನಕೆ ತುಂಬುವುದು ಆಂತರಿಕ ಶಕ್ತಿ,

ಅಭ್ಯಾಸವೇ ನಮ್ಮ ನಿಜವಾದ ಅದ್ಬುತ ಬಲ, ಶಕ್ತಿ.

Saturday, December 27, 2025

ಧೈರ್ಯವೇ ಸೇತುವೆ

ಸಂದೇಹದ ನೆರಳು ಮನದಲಿ ಬೀಡು ಬಿಟ್ಟರೆ,

ಕನಸುಗಳ ಬೆಳಕಿಗೆ ಗ್ರಹಣ ಹಿಡಿಯುವುದು.

 

ನಂಬಿಕೆಯ ಬಲ ದೀಪ ಹಚ್ಚಿದಾಗ ಮಾತ್ರ,

ನಾಳೆಯ ಹಾದಿಗೆ ದಾರಿದೀಪವಾಗುವುದು.

 

ಧೈರ್ಯವೇ ಸೇತುವೆ, ಬಲ, ಆಶೆಯೇ ದಾರಿ,

ಸಂದೇಹವಿಲ್ಲದ ಮನವೇ ಸಾಧನೆಗೆ ರಹದಾರಿ.

ಸಣ್ಣ ಹೆಜ್ಜೆ

ಪ್ರತಿ ದಿನದ ಸಣ್ಣ ಹೆಜ್ಜೆಯಿಡು,

ಮುಗಿಯದ ದಾರಿಯಲಿ ಬೆಳಕ ಕಾಣು.

 

ಇಂದೇ ಸಣ್ಣ ಪ್ರಯತ್ನದ ಬೀಜ ಬಿತ್ತಿದರೆ,

ನಾಳೆ ದೊಡ್ಡ ಕನಸುಗಳ ಮರ ಬೆಳೆವುದು.

 

ತಾಳ್ಮೆಯ ಹಾದಿ, ಹಠಮಾರಿ ಮನ,ತಪಸ್ಸು,

ದೂರವಿಲ್ಲ ಸಾಧನೆಯ ಗೀತೆ ಹಾಡುವ ದಿನ.

ಹೂವ್ನಗು

ನಗು ಒಂದು ಹೂವು, ಹೃದಯದಲ್ಲಿ ಅರಳಲಿ,

ಸಣ್ಣ ದಯೆಯ ಮಾತು, ಲೋಕವನ್ನೇ ಬೆಳಗಲಿ.

 

ಮುಗ್ಧ ಕಣ್ಣನೋಟದಿ, ಸ್ನೇಹದ ಬೆಳಕು ಹರಡಿ,

ಯಾರಿಗಾದರೂ ಸಂತೋಷ ತರುವ ಮನಸ್ಸು ಮಾಡಿ.

 

ನೀವು ನೀಡಿದ ನಗು, ಹೃದಯದಲ್ಲಿ ಉಳಿಯುವುದು,

ಅದು ಬೆಳಕಾಗಿ, ಜಗವನ್ನೇ ಸುಂದರಗೊಳಿಸುವುದು.

ಅರಳಿದ ಮನಸ್ಸು

ಒಳಗಿನ ಕಿಡಿ, ಚಿಕ್ಕದು ಪ್ರಕಾಶಮಾನ

ಚಿಂತನೆ ಬಡಿದೆಬ್ಬಿಸಿ, ಕತ್ತಲೆಯ ಓಡಿಸುವುದು.  

ಮಣ್ಣಿನ ಪಾತ್ರೆಯಲ್ಲ, ಬೇಕು,ಬೇಡಗಳ ತುಂಬುವುದಲ್ಲ, 

ಅದ್ಭುತ ಮಾರ್ಗಗಳನ್ನು ತೋರಿಸುವ ದಾರಿದೀಪ. 

 

ಪ್ರತಿ ಪ್ರಶ್ನೆ ಮೃದುವಾದ ಭಾವನೆಗಳ ಎಬ್ಬಿಸುವುದು, 

ಪ್ರತಿ ಕನಸು ಕಲಿಕೆಯ ಜ್ವಾಲೆಗೆ ಹೆಸರು ನೀಡುವುದು. 

ಒಮ್ಮೆ ಅರಳಿದ  ಮನಸ್ಸು ಹಾರಲು ಕಲಿಯುವುದು, 

ಮನ್ವಂತರದ ಮನುಕುಲಕ್ಕೆ ಜೀವಂತ ಬೆಳಕಾಗುವುದು.

Friday, December 26, 2025

ಮೊದಲ ಹೆಜ್ಜೆ

ಬೀಜವು ದೊಡ್ಡದಾಗಿರಬೇಕಿಲ್ಲ

ಜಗದ ಬೆಳಕ ಕಾಣಲು ಸಣ್ಣ ಆಸೆ, ಧೈರ್ಯ ಸಾಕು. 

ಮೊಗ್ಗು ಚಿಕ್ಕದಾದರೂ, ಭರವಸೆಯಿಂದ ಹಿಗ್ಗಿ,  

ಮರ ಆಕಾಶದತ್ತ ಎತ್ತರವಾಗಿ ಬೆಳೆವುದು.  

 

ಮಹತ್ವವು ಧೈರ್ಯದಿಂದಲೇ ಹುಟ್ಟುವುದು

ಚಿಕ್ಕ ಹೃದಯಗಳಲ್ಲಿ, ಭರವಸೆಯ ಕಂಗಳಲ್ಲಿ.  

ಇಂದಿನ ಚಿಕ್ಕ ಹೆಜ್ಜೆ, ಸರಳವಾದರೂ, 

ನಾಳೆಯ ಸಾಧನೆ ವಿಶ್ವ ವ್ಯಾಪಿಯಾಗುವುದು.  

Wednesday, December 24, 2025

ಅಟಲ - ಅಚಲ

ವಿನಯ ಮೂರ್ತಿ, ಧೈರ್ಯದ ದೀಪ,

ದೇಶದ ಹೃದಯದಲ್ಲಿ ಶಾಶ್ವತ ರೂಪ.

 

ರಾಜಕೀಯದ ಗಗನದಲ್ಲಿ ಬೆಳಕಾದವ,

ಕಾವ್ಯದ ಹೃದಯದಲ್ಲಿ ನೆಲೆಸಿದವ.

 

हार नहीं मानूंगा…” ಎಂದು ಘೋಷಿಸಿದವ,

ಅಸಾಧ್ಯವನ್ನೂ ಸಾಧ್ಯಗೊಳಿಸಿದವ.

 

ಸುಶಾಸನದ ದಾರಿ ತೋರಿದವ,

ಜನಮನದಿ ಕವಿಯಾಗಿ ಉಳಿದವ.

ಮನದ ಬೆಳಕು

ಕನಸುಗಳ ದಾರಿ ದೂರವಲ್ಲ,

ಮನದ ಬೆಳಕು ಹಾದಿ ತೋರಲಿದೆ.


ಧೈರ್ಯದ ಹೆಜ್ಜೆ ಇಟ್ಟಾಗಲೇ,

ಮಿತಿಯೆಂಬ ಗೋಡೆ ಕುಸಿಯಲಿದೆ.


ನಂಬಿಕೆಯ ಬೀಜ ಬಿತ್ತಿದರೆ,

ಜೀವನದಲ್ಲಿ ಹೂವು ಅರಳಲಿದೆ.

ಅಸೀಮ ಮನಸ್ಸು

ಮನದಲ್ಲಿ  ಗಡಿಗಳು ನಿನ್ನ ದಾರಿಯಲ್ಲಿ,

ನಡೆ ಮುಕ್ತವಾಗಿ ತೊರೆದು ಭಯವಿಲ್ಲಿ.

 

ಕನಸುಗಳೆಲ್ಲಾ ನಿನ್ನ ಕೈಯಲ್ಲಿ,

ಧೈರ್ಯವಿದ್ದರೆ ಜಯವು ನಿನ್ನ ತೆಕ್ಕೆಯಲ್ಲಿ.

 

ಕಾಣದ ಮಿತಿಯೆಂದರೆ ಮನದ ಕಲ್ಪನೆ,

ಸಕಾರಾತ್ಮಕತೆ ನೀಡುತ್ತದೆ ಶಕ್ತಿಯ ಪರಿಕಲ್ಪನೆ.

 

ನಿನ್ನ ಮನಸ್ಸೇ ನಿನ್ನ ಅಗಾಧ ಬಲ,

ಅದು ತೆರೆದರೆ ಗೆಲುವೇ ನಿನ್ನ ಫಲ.

Tuesday, December 23, 2025

ನಾಳೆಗಳು ನನ್ನವು !

 ಕಂಡೆ ಅದೆಷ್ಟು ಸೂರ್ಯೋದಯಗಳ,

ಕಂಡೆ ಎಷ್ಟೊಂದು ಚಂದ್ರೋದಯಗಳ,

ಮನವು ಮುದಗೊಳ್ಳುವುದು ಪ್ರತಿದಿನ,

ಸಾರ್ಥಕತೆಯ ದಾರಿಗಳ ಹೆಜ್ಜೆ ತಡವರಿಸಿದೆ,

ಗುರಿ, ಗುರುವ ಹುಡುಕುತ್ತಲೇ ಮನವು ಅಲೆದಿದೆ,

ದಾರಿ ಹುಡುಕುವ ತವಕ ಮಾತ್ರ ಉಳಿದಿದೆ,

ದಾರಿಯ ಮೇಲೆ ಭರವಸೆಯ ಬೆಳಕು ಹರಿದಿದೆ,

ನಾಳೆಗಳ ಹುರುಪು ಇನ್ನೂ ಜೀವಂತ,

ನಾಳೆಗಳು ನನ್ನವು, ಬೆಳಕು ನನ್ನದು.

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...