ನೋವು ಬಂದಾಗ ಹೃದಯ ನಲುಗದಿರಲಿ,
ನೋವ
ಎದುರಿಸುವ ತಿಕ್ಕಾಟದಿ ಬೆಳಕು ಕಾಣಲಿ.
ಹರಿವ
ಕಣ್ಣೀರ ಹನಿಯಲಿ ಸುಖದ ಬೀಜ ಬಿತ್ತೋಣ,
ಶಿಸ್ತಿನ
ನೋವ ಹಾದಿಯ ಬಳಸಿ ಜೀವನ ಬೆಳೆಯೋಣ.
ನೋವು ಬರಲಿ
ಎದುರಿಸೋಣ ಹಠ, ಧೈರ್ಯದಿ,
ನೋವ
ಮರೆಮಾಡುವುದು ಬೇಡ , ಬರಲಿ ಬಿಡಿ.
ಇರುವ
ನೋವು ಮನದ ಶಾಂತಿಯ ಕದಡುವುದು,
ಅನುಭವಿಸಿ,
ಎದುರಿಸಿ ಹೃದಯದಿ ಬಲ ನೀಡುವುದು.
ಬೆಳಗಿನ
ದಿನಚರಿ ಹವ್ಯಾಸ, ಅಭ್ಯಾಸ ಶಕ್ತಿ ತುಂಬುವುದು,
ಸಂಜೆಯ
ಸೂರ್ಯಾಸ್ತ ಮನದಲಿ ಶಾಂತಿ ತುಂಬುವುದು,
ಸಣ್ಣ,
ಸಣ್ಣ ಹೆಜ್ಜೆ ಇಡು, ದೊಡ್ಡ ಬದಲಾವಣೆಗೆ
ಸಜ್ಜಾಗು,
ನಿರಂತರತೆಯ
ಕಾಯ್ದುಕೋ, ಹೊಸ ಗುರಿಯೆಡೆ ಪಕ್ಕಾಗು.
ನೋವ
ಅನುಭವಿಸಿ ದಾಟು, ನಗು ಅರಳುವುದು,
ಪಕ್ವವಾಗಿ
ಹೃದಯದಿ ಹೊಸ ಕನಸು ಮೂಡುವುದು.
ತಾಳ್ಮೆ,
ಶಿಸ್ತು, ಧೈರ್ಯ, ನಿರಂತರತೆಗೆ ತಲೆ ಬಾಗು,
No comments:
Post a Comment