Wednesday, December 24, 2025

ಅಟಲ - ಅಚಲ

ವಿನಯ ಮೂರ್ತಿ, ಧೈರ್ಯದ ದೀಪ,

ದೇಶದ ಹೃದಯದಲ್ಲಿ ಶಾಶ್ವತ ರೂಪ.

 

ರಾಜಕೀಯದ ಗಗನದಲ್ಲಿ ಬೆಳಕಾದವ,

ಕಾವ್ಯದ ಹೃದಯದಲ್ಲಿ ನೆಲೆಸಿದವ.

 

हार नहीं मानूंगा…” ಎಂದು ಘೋಷಿಸಿದವ,

ಅಸಾಧ್ಯವನ್ನೂ ಸಾಧ್ಯಗೊಳಿಸಿದವ.

 

ಸುಶಾಸನದ ದಾರಿ ತೋರಿದವ,

ಜನಮನದಿ ಕವಿಯಾಗಿ ಉಳಿದವ.

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...