Saturday, May 2, 2026

ಮೌನದ ಅಸ್ತಿತ್ವ

ಮೌನವೇಕೆ?

ಏಕೆ ನಿಂತಿರುವೆ?

ಗತ ಕಾಲದ್ಲಲೇಕೆ ನರಳುವೆ?

ಕಾಲ ಮುಂದೆ ಸಾಗಿದೆ ಕಾಣದೆ.

 

ನೆನಪುಗಳು ಬೇಕು,


ತಂಗಾಳಿಯಂತೆ ಮನಸಿಗೆ.

ಬಿರುಗಾಳಿಯಂತಾಗಬಾರದು,

ಉಳಿಗಾಲವಿಲ್ಲ ನಿನಗೆ.

 

ನಾನು ಚಿರಂಜೀವಿ,

ನನಗೆ ಸಾವಿಲ್ಲ.

ಸತ್ತನೆಂಬ ಭ್ರಮೆ ಬೇಡ,

ನಿನ್ನ ಉಸಿರಲ್ಲಿ ನಾನಿರುವೆ.

 

ಉದಯಿಸುವ ಸೂರ್ಯನ ಬೆಳಕಲ್ಲಿ,

ಬೆಳಗಿನ ಬೀಸುವ ತಂಗಾಳಿಯಲ್ಲಿ.

ಮರಗಿಡಗಳ ಚಿನ್ನದ ಚಿಗುರಲ್ಲಿ,

ಆಕಾಶದಿಂದ ಧರೆಗಿಳಿವ ಮಳೆಯಲ್ಲಿ.

 

ಪಂಚಭೂತಗಳಲ್ಲಿ ಕಾಣದೆ,

ಇದ್ದೂ ಇಲ್ಲದಂತಿರುವೆ ನಾನು.

ಬರಿಗಣ್ಣಿಗೆ ಕಾಣಲಾರೆನು ನಿಜ,

ನಿನ್ನ ಕಣ ಕಣದಲ್ಲಿ ನೀನೆಲ್ಲಿರುವೆ ನಾನು.

No comments:

Post a Comment

ಮೌನದ ಅಸ್ತಿತ್ವ

ಈ ಮೌನವೇಕೆ ? ಏಕೆ ನಿಂತಿರುವೆ ? ಗತ ಕಾಲದ್ಲಲೇಕೆ ನರಳುವೆ ? ಕಾಲ ಮುಂದೆ ಸಾಗಿದೆ ಕಾಣದೆ .   ನೆನಪುಗಳು ಬೇಕು , ತಂಗಾಳಿಯಂತೆ ಮನಸಿಗೆ . ಬಿರ...